ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ, 22-5-1971

​ಪ್ರಜಾವಾಣಿ ವಾರ್ತೆ
Published 21 ಮೇ 2021, 19:30 IST
Last Updated 21 ಮೇ 2021, 19:30 IST

ಅಸ್ಪೃಶ್ಯತೆ ಅಪರಾಧಕ್ಕೆ ತೀವ್ರ ಶಿಕ್ಷೆಗೆ ಸಲಹೆ

ನವದೆಹಲಿ, ಮೇ 21– ಅಸ್ಪೃಶ್ಯತೆ ಮೊಕದ್ದಮೆಗಳಲ್ಲಿ ಶಿಕ್ಷೆ ಹೆಚ್ಚಿಸಬೇಕೆಂದು ಇಂದು ಇಲ್ಲಿ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಚಿವ ಸಿದ್ಧಾರ್ಥ ಶಂಕರರಾಯ್‌ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ ರಾಜ್ಯಗಳ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವರ ಸಮ್ಮೇಳನವು ಅವಿರೋಧವಾಗಿ ಸರ್ಕಾರಕ್ಕೆ ಶಿಫಾರಸು ಮಾಡಿತು.

ಎಸಗಿದ ಅಪರಾಧಗಳ ಸಂಖ್ಯೆಯನ್ನು ಆಧರಿಸಿ ಕನಿಷ್ಠ ಮೂರು ತಿಂಗಳ ಸಜಾ ಜತೆಗೆ 50 ರೂಪಾಯಿಗಳ ದಂಡದಿಂದ ಆರಂಭಿಸಿ ಪರಮಾವಧಿಯಾಗಿ ಎರಡು ವರ್ಷಗಳ ಸಜಾ ಹಾಗೂ 1,000 ರೂಪಾಯಿ ದಂಡ ವಿಧಿಸಬೇಕೆಂದು ಸಮ್ಮೇಳನವು ಸಲಹೆ ಮಾಡಿತು.

ADVERTISEMENT

ಖಜಾನೆ ಮೂಲಕ ನಗದು ಸಂಬಳ: ಯೋಜನೆ ನ್ಯೂನತೆ

ಬೆಂಗಳೂರು, ಮೇ 21– ಖಾಸಗಿ ಶಾಲೆಗಳ ಶಿಕ್ಷಕರಿಗೆ ಚೆಕ್‌ಗಳ ಬದಲು, ಖಜಾನೆ ಮೂಲಕ ನಗದು ರೂಪದಲ್ಲಿ ಸಂಬಳ ಕೊಡಲು ಸಾಧ್ಯವೇ ಎಂಬ ರಾಜ್ಯಪಾಲರ ಸೂಚನೆಯನ್ನು ಕಳೆದ ಎರಡು ದಿನಗಳಿಂದ ಪರಿಶೀಲಿಸುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಈ ಸಲಹೆಯೂ ನ್ಯೂನತೆಯಿಂದ ಹೊರತಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.