ನವದೆಹಲಿ, ಮೇ 6 (ಪಿಟಿಐ)– ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳನ್ನು ಈಗ ರೈತರಿಗೆ ನೀಡಲಾಗುತ್ತಿದೆ.
ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಕ್ರೆಡಿಟ್ ಕಾರ್ಡ್ಗಳನ್ನು ನೀಡಲು ಸಾರ್ವಜನಿಕ ವಲಯದ 20 ಬ್ಯಾಂಕ್ಗಳು ಯೋಜನೆಯನ್ನು ಜಾರಿ ಮಾಡಿವೆ ಎಂದು ಇಂದು ಲೋಕಸಭೆಯಲ್ಲಿ ತಿಳಿಸಲಾಯಿತು.
ಉತ್ತಮ ಕ್ರೆಡಿಟ್ ದಾಖಲೆಯನ್ನು ಹೊಂದಿದ ರೈತರಿಗೆ ಈ ಕಾರ್ಡ್ಗಳನ್ನು ನೀಡಲಾಗುವುದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಎಂ.ವಿ. ಚಂದ್ರಶೇಖರ ಮೂರ್ತಿ ಅವರು ಶೀಲಾ ಗೌತಂ ಅವರಿಗೆ ಪ್ರಶ್ನೋತ್ತರ ವೇಳೆಯಲ್ಲಿ
ತಿಳಿಸಿದರು.
ಶಂಕರಾಚಾರ್ಯರ ಆಗ್ರಹ
ವಾರಾಣಸಿ, ಮೇ 6 (ಯುಎನ್ಐ)– ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟುವ ಸಲುವಾಗಿ ಕೇಂದ್ರವು ಆ ಪ್ರದೇಶವನ್ನು ಸಂತರಿಗೆ ವಹಿಸಿಕೊಡಬೇಕೆಂದು ದ್ವಾರಕಾ ಪೀಠದ ಶಂಕರಾಚಾರ್ಯರು ಆಗ್ರಹಪಡಿಸಿದ್ದಾರೆ.
ಈಗಾಗಲೇ 26 ಜನರಸಮಿತಿಯನ್ನು ರಚಿಸಲಾಗಿದ್ದು, ರಾಮಜನ್ಮಭೂಮಿಯನ್ನು ಸಂತರಿಗೆ ವರ್ಗಾಯಿಸಬೇಕೆಂದು ನಿರ್ಣಯದ ಮೂಲಕ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರನ್ನು ಒತ್ತಾಯಿಸಲಾಗಿದೆ ಎಂದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು, ಈ ಕುರಿತು ಕೇಂದ್ರ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂದು ವಿಷಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.