
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
‘ಕಾಂಗ್ರೆಸಿಗರ ಅಧಿಕಾರ ದುರುಪಯೋಗ’
ತಿರುಚಿ, ಜ. 27– ಕಾಂಗ್ರೆಸ್ ಡೆಮೊಕ್ರಾಟಿಕ್ ರಂಗದ ಸಭೆಯು ನಿನ್ನೆ ಸಭೆ ಸೇರಿ, ತಮ್ಮ ಸ್ಥಾನ ಹಾಗೂ ಅಧಿಕಾರದ ದುರುಪಯೋಗದಿಂದ ಅಲ್ಪಕಾಲದಲ್ಲೇ ಆಶ್ಚರ್ಯಕರವಾಗಿ ಶ್ರೀಮಂತರಾದ ಕಾಂಗ್ರೆಸಿಗರ ಬಗ್ಗೆ ಸಾಕಷ್ಟು ಅಂಕಿಅಂಶಗಳನ್ನು ಕೂಡಿಸಲು ನಿಷ್ಪಕ್ಷಪಾತ ಸಮಿತಿಯೊಂದನ್ನು ಏರ್ಪಡಿಸಿ, ತಪ್ಪಿತಸ್ಥರೆಂದು ಕಂಡುಬಂದವರಿಗೆ ಮೂರು ವರ್ಷಗಳ ಕಾಲ ಯಾವ ಅಧಿಕಾರವನ್ನೂ ವಹಿಸದಂತೆ ನಿಷೇಧಿಸಬೇಕೆಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಪ್ರಾರ್ಥಿಸಿತು.
ಶ್ರೀ ಅರಬಿಂದೊ, ಸರದಾರ್ ಪಟೇಲ್ ಮತ್ತು ಶ್ರೀ ಠಕ್ಕರ್ ಬಾಪಾ ಅವರ ಮರಣದ ಬಗ್ಗೆ ಸಂತಾಪ ಸೂಚಿಸಿ ಸಮ್ಮೇಳನವು ನಿರ್ಣಯಗಳನ್ನು ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.