ADVERTISEMENT

25 ವರ್ಷಗಳ ಹಿಂದೆ: ಗದ್ದುಗೆ ಪೂಜೆಗೆ ರುದ್ರಮುನಿ ಸ್ವಾಮೀಜಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 23:30 IST
Last Updated 26 ಸೆಪ್ಟೆಂಬರ್ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಸೆ. 26– ಹುಬ್ಬಳ್ಳಿಯ ಮೂರು ಸಾವಿರ ಮಠದ ಅತಿಥಿ ಗೃಹದಲ್ಲಿರುವ ರುದ್ರಮುನಿ ದೇವರು ಅವರು, ಅಲ್ಲೇ ಇರಲು ಮತ್ತು ಅವರು ಪ್ರತಿದಿನ ಕರ್ತರು ಸಿದ್ದರಾಮೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಲು ಅಡ್ಡಿಪಡಿಸಬಾರದು ಎಂದು ಹೈಕೋರ್ಟ್‌ ಇಂದು ಆದೇಶಿಸಿತು.

ರುದ್ರಮುನಿ ದೇವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಆರ್‌.ವಿ. ರವೀಂದ್ರನ್‌ ಮತ್ತು ವಿ.ಜಿ. ಸಭಾಹಿತ್‌ ಅವರು ಇರುವ ವಿಭಾಗೀಯ ನ್ಯಾಯಪೀಠ, ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿ ಮಧ್ಯಂತರ ಆಜ್ಞೆ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT