ADVERTISEMENT

50 ವರ್ಷಗಳ ಹಿಂದೆ | ಶನಿವಾರ, 25–7–1970

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST

ಗಡಿ ಮಾತುಕತೆಗೆ 29ರಂದು ದೆಹಲಿಗೆ ವಿ.ಪಿ.ನಾಯಕ್‌

ಮುಂಬಯಿ ಜುಲೈ 24– ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಪ್ರಧಾನಿ ಇಂದಿರಾ ಗಾಂಧಿ ಅವರ ಜತೆ ಮತ್ತಷ್ಟು ಮಾತುಕತೆ ನಡೆಸುವುದಕ್ಕಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ವಿ.ಪಿ.ನಾಯಕ್‌ ಅವರು ಈ ತಿಂಗಳು 29ರಂದು ದೆಹಲಿಗೆ ಹೋಗುವರು.

ಈ ಗಡಿ ವಿವಾದದ ಬಗ್ಗೆ ಶ್ರೀ ನಾಯಕ್‌ ಅವರ ಜತೆ ಪ್ರಧಾನಿ ಅವರು ದೆಹಲಿಯಿಂದ ಟೆಲಿಫೋನಿನಲ್ಲಿ ಮಾತುಕತೆ ನಡೆಸಿದ್ದರು. ಹೀಗಾಗಿ, ದೆಹಲಿಯಲ್ಲಿ ನಡೆಯಲಿರುವುದು ಈ ತಿಂಗಳಲ್ಲಿ ಪ್ರಧಾನಿ ಮತ್ತು ನಾಯಕ್‌ ಅವರ ನಡುವಿನ ಮೂರನೇ ಸುತ್ತಿನ ಮಾತುಕತೆಯಾಗಲಿದೆ.

ADVERTISEMENT

ಅಕ್ಟೋಬರ್‌ನಲ್ಲಿ ಕಾಳಿನದಿ ಯೋಜನೆ ಪೂರ್ವಭಾವಿ ಕಾರ್ಯ ಆರಂಭ

ಬೆಂಗಳೂರು, ಜುಲೈ 24– ರಾಜ್ಯದಲ್ಲಿ ವಿದ್ಯುಚ್ಛಕ್ತಿ ಯೋಜನೆಗಳಿಗಾಗಿ ದೀರ್ಘಾವಧಿಯ ಸಾಲವೆತ್ತಿ ಯೋಜನೆ ಕೈಗೊಳ್ಳಲು ಮೈಸೂರು ವಿದ್ಯುಚ್ಛಕ್ತಿ ಕಾರ್ಪೊರೇಷನ್‌ ರಚಿಸಲಾಗಿದೆ.

ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಕಾರ್ಪೊರೇಷನ್ನಿನ ಅಧ್ಯಕ್ಷರು. ಶ್ರೀ ಪಿ.ಆರ್‌.ನಾಯಕ್‌ರವರು ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿ ನೇಮಿಸಲ್ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.