ADVERTISEMENT

ಗುರುವಾರ, 1–12–1994: ಬಿ.ವಿ. ಕಾರಂತರಿಗೆ ‘ಕಾಳಿದಾಸ ಸಮ್ಮಾನ’

25 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 17:09 IST
Last Updated 30 ನವೆಂಬರ್ 2019, 17:09 IST

ಬಿ.ವಿ. ಕಾರಂತರಿಗೆ ‘ಕಾಳಿದಾಸ ಸಮ್ಮಾನ’

ಭೋಪಾಲ್, ನ. 30– (ಯುಎನ್ಐ)– ಹೆಸರಾಂತ ರಂಗಭೂಮಿ ನಿರ್ದೇಶಕ ಬಿ.ವಿ. ಕಾರಂತರಿಗೆ 1993–94ನೇ ಸಾಲಿನ ‘ಕಾಳಿದಾಸ ಸಮ್ಮಾನ’ ನೀಡಲಾಗಿದೆ. ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಫಲಕ ಇರುವ ಈ ಪ್ರಶಸ್ತಿಯನ್ನು ಕಾರಂತರು ಸೃಜನಶೀಲ ಕಲೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸಲು ನೀಡಲಾಗುತ್ತಿದೆ.

ಕಾರಂತರು ಬಹುಕಾಲದಿಂದ ಸಂಪರ್ಕ ಹೊಂದಿರುವ ಭೋಪಾಲದ ಕಲಾ ಸಂಕೀರ್ಣ ‘ಭಾರತ ಭವನ’ದಲ್ಲಿ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ADVERTISEMENT

ಇಂದು ಅಂತಿಮ ಸುತ್ತಿನ ಮತದಾನ ಘಟಾನುಘಟಿಗಳ ಭವಿಷ್ಯ ನಿರ್ಧಾರ

ಬೆಂಗಳೂರು, ನ. 30– ರಾಜ್ಯ ವಿಧಾನಸಭೆಗೆ ನಡೆಯಲಿರುವ ಅತ್ಯಂತ ಕುತೂಹಲದ ಚುನಾವಣೆಯ ಎರಡನೇ ಹಾಗೂ ಅಂತಿಮ ಸುತ್ತಿನ ಮತದಾನ ನಾಳೆ ಹತ್ತು ಜಿಲ್ಲೆಗಳ 109 ಕ್ಷೇತ್ರಗಳಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.