ಬೆಂಗಳೂರು, ಸೆಪ್ಟೆಂಬರ್ 18– ಜಯನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿನ್ನೆ ನಡೆದ ಹಿಂಸಾಚಾರದಿಂದ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದ ಗೃಹ ಖಾತೆಯ ರಾಜ್ಯ ಸಚಿವ ರೋಷನ್ಬೇಗ್ ಅವರು, ಹಿಂಸಾಚಾರ ಹಾಗೂ ಪೊಲೀಸ್ ಗೋಲಿಬಾರ್ನಿಂದ ಮೃತಪಟ್ಟ ನಾಲ್ವರ ಕುಟುಂಬದವರಿಗೆ ಇಂದು ಇಲ್ಲಿ ಪರಿಹಾರ ಪ್ರಕಟಿಸಿದರು.
ಗಲಭೆ ನಿರತ ಗುಂಪಿನ ಇರಿತದಿಂದ ಮೃತಪಟ್ಟ ಪೊಲೀಸ್ ಪೇದೆಯ
ಕುಟುಂಬ ವರ್ಗದವರಿಗೆ 2 ಲಕ್ಷ, ಗೋಲಿಬಾರ್ನಿಂದ ಸತ್ತ ಇಬ್ಬರು ಹಾಗೂ ಹೃದಯಾಘಾತದಿಂದ ಮೃತರಾದ ಬಸ್ ಪ್ರಯಾಣಿಕರೊಬ್ಬರ ಕುಟುಂಬ ವರ್ಗದವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.