ADVERTISEMENT

25 ವರ್ಷಗಳ ಹಿಂದೆ: ಭಾನುವಾರ 1.12.1996

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 19:30 IST
Last Updated 30 ನವೆಂಬರ್ 2021, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಭಿನ್ನಮತ ಗುರುತಿಸಲು ಪಟೇಲ್ ನಿರಾಕರಣೆ

ನವದಹೆಲಿ, ನ. 30 (ಯುಎನ್‌ಐ)– ಕರ್ನಾಟಕದ ಆಡಳಿತ ಜನತಾದಳದಲ್ಲಿ ಭಿನ್ನಮತ ಇದೆ ಎಂಬುದನ್ನು ಒಪ್ಪಲು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಸಿದ್ಧರಿರಲಿಲ್ಲ.

ಜನತಾದಳದ ಸೂರಜ್‌ಕುಂಡ್ ಶಿಬಿರದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಪಟೇಲ್, ‘ಅವರಿಗೆ ಮಾನ್ಯತೆ ನೀಡಲು ತಿರಸ್ಕರಿಸುತ್ತೇನೆ’ ಎಂದರು.

ADVERTISEMENT

ನಾಯಕತ್ವದ ಬಗ್ಗೆ ಭಿನ್ನಮತೀಯರು ದೂರುತ್ತಿರುವ ಪತ್ರಿಕಾ ವರದಿಗಳನ್ನು ಪಕ್ಷದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ದೃಢಪಡಿಸಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.