ಅನುಕಂಪದ ನೌಕರಿ ಸರ್ಕಾರದ ಕಳಕಳಿ
ಬೆಂಗಳೂರು, ಫೆ. 13–ಸರ್ಕಾರಿ ಸೇವೆಯಲ್ಲಿರುವಾಗಲೇ ಅಸುನೀಗುವ ನೌಕರರ ಕುಟುಂಬದವರಲ್ಲಿ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಬಗ್ಗೆ ರಾಜ್ಯ ಸರ್ಕಾರ ತೀವ್ರ ಕಳಕಳಿಯನ್ನು ಹೊಂದಿದ್ದು, ಇನ್ನು ಎರಡು ತಿಂಗಳ ಒಳಗಾಗಿ ಈ ಸಂಬಂಧದಲ್ಲಿ ಆದೇಶವನ್ನು ಹೊರಡಿಸಲಿದೆ.
ಸರ್ಕಾರ ಈ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಧಾರ, ಸಂಸಾರದ ನೊಗವನ್ನು ಹೆಗಲಿಗೇರಿಸಿಕೊಂಡಿದ್ದ ಮನೆ ಒಡೆಯನನ್ನು ಕಳೆದುಕೊಂಡ ನತದೃಷ್ಟರ ಪಾಲಿಗೆ ಒಂದು ವಿಧದಲ್ಲಿ ಮುಂದಿನ ಬದುಕಿಗೆ ಆಶಾಕಿರಣ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.