ಲಿಂಗನಮಕ್ಕಿ, ಕಾಳಿ ನದಿ ಯೋಜನೆ ಎಲ್ಲ ಘಟ್ಟಗಳಿಗೆ ಮಂಜೂರಾತಿಗೆ ಒತ್ತಾಯ
ಬೆಂಗಳೂರು, ಮೇ 17– ಕಾಳಿ ನದಿ ಯೋಜನೆಯ ಎಲ್ಲ ಘಟ್ಟಗಳಿಗೆ, ಲಿಂಗನಮಕ್ಕಿ ವಿದ್ಯುತ್ ಯೋಜನೆಗೆ ಶೀಘ್ರ ಮಂಜೂರಾತಿ ನೀಡುವಂತೆ ಕೇಂದ್ರಕ್ಕೆ ರಾಜ್ಯಪಾಲ ಶ್ರೀ ಧರ್ಮವೀರರವರು ಪತ್ರ ಬರೆದಿದ್ದಾರೆ.
ಕಾಳಿ ನದಿ ವಿದ್ಯುತ್ ಯೋಜನೆಯ ಪ್ರಥಮ ಹಂತಕ್ಕೆ ಈಗಾಗಲೇ ಕೇಂದ್ರ ಮಂಜೂರಾತಿ ನೀಡಿದೆ. ಶರಾವತಿ ಯೋಜನೆಯ ಕೊನೆಯ ಭಾಗದ ನೀರನ್ನು ಉಪಯೋಗಿಸಿ ಲಿಂಗನಮಕ್ಕಿಯಲ್ಲಿ ವಿದ್ಯುಚ್ಛಕ್ತಿ ಉತ್ಪನ್ನದ ಸಣ್ಣ ಯೋಜನೆಗೆ ರಾಜ್ಯ ಸರ್ಕಾರ ಮಂಜೂರಾತಿ
ಕೇಳುತ್ತಿದೆ.
ಮಹಾರಾಜರಿಗೆ ಎರಡು ಪಕ್ಕೆಲುಬುಗಳ ಮುರಿತ
ಮೈಸೂರು, ಮೇ 17– ನಿನ್ನೆ ಕಾರು ಅಪಘಾತದಲ್ಲಿ ಗಾಯಗೊಂಡ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರಿಗೆ ಬಲಪಾರ್ಶ್ವದ ಪಕ್ಕೆಲುಬುಗಳು ಮುರಿದಿರುವುದಾಗಿ ಕೆ.ಆರ್. ಆಸ್ಪತ್ರೆಯ ಡಾ. ಕೆ.ಗೋವಿಂದ ದಾಸ್ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.