ADVERTISEMENT

ಪ್ರಜಾವಾಣಿ 50 ವರ್ಷದ ಹಿಂದೆ| ಗುರುವಾರ, 22 ಮಾರ್ಚ್‌ 1973

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 19:30 IST
Last Updated 21 ಮಾರ್ಚ್ 2023, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರಾಷ್ಟ್ರದಾದ್ಯಂತ ಧಾನ್ಯದ ಸಗಟು ಪೇಟೆ ಬಂದ್‌; ಹರತಾಳ ‘ಯಶಸ್ವಿ’

ನವದೆಹಲಿ, ಮಾರ್ಚ್‌ 21– ಆಹಾರ ಧಾನ್ಯಗಳ ಸಗಟು ವ್ಯಾಪಾರವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಪ್ರತಿಭಟಿಸಿ ರಾಷ್ಟ್ರದಾದ್ಯಂತ ಆಹಾರಧಾನ್ಯ ಸಗಟು ಪೇಟೆಗಳು ಇಂದು ಒಂದು ದಿನದ ‘ಹರತಾಳ’ ಆಚರಿಸಿದವು.

ಎಲ್ಲ ರಾಜ್ಯಗಳಲ್ಲಿಯೂ ‘ಹರತಾಳ’ ಪೂರ್ಣವಾಗಿತ್ತೆಂದು ಅದಕ್ಕೆ ಕರೆ ಕೊಟ್ಟಿದ್ದ ಅಖಿಲ ಭಾರತ ಆಹಾರಧಾನ್ಯ ವ್ಯಾಪಾರಸ್ಥರ ಸಂಘಗಳ ಫೆಡರೇಷನ್‌ ಹೇಳಿದೆ.

ADVERTISEMENT

ರಾಷ್ಟ್ರದ ಅನೇಕ ಕಡೆ ಭಾಗಶಃ ಸಗಟು ವ್ಯಾಪಾರಸ್ಥರು, ಚಿಲ್ಲರೆ ವ್ಯಾಪಾರಸ್ಥರು ಹಾಗೂ ಸಂಬಂಧಪಟ್ಟ ವಸ್ತುಗಳ ವಹಿವಾಟುಗಳವರು ಸಹ ಹರತಾಳಕ್ಕೆ ಸಹಾನುಭೂತಿ ವ್ಯಕ್ತಪಡಿಸಲು ತಮ್ಮ ಅಂಗಡಿಗಳನ್ನು ಮುಚ್ಚಿದ್ದರೆಂದು ಇಲ್ಲಿಗೆ ವರದಿ ಬಂದಿದೆ.

ವಿದ್ಯಾರ್ಥಿಗಳಿಗೆ ಬರದ ಬೇಗೆಯ ಪರಿಚಯ

ಬೆಂಗಳೂರು, ಮಾರ್ಚ್‌ 21– ಬರದ ಬೇಗೆಯನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು 21 ದಿನಗಳ ಕಾಲ ಬರದ ಪ್ರದೇಶಗಳಿಗೆ ಕಳುಹಿಸಿಕೊಡಲಾಗುವುದು.

ಶಿಕ್ಷಣ ಸಚಿವ ಶ್ರೀ ಎ.ಆರ್‌.ಬದರಿನಾರಾಯಣ್ ಅವರು ಈ ವಿಷಯವನ್ನು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.