ಲೋಕಸಭೆ ಚುನಾವಣೆಗಳಿಗಾಗಿ ಕಮ್ಯುನಿಸ್ಟ್, ಲೀಗ್ ಜತೆ ಆಡಳಿತ ಕಾಂಗ್ರೆಸ್ ಸೇರದು
ನವದೆಹಲಿ, ಜ. 10– ಮಧ್ಯಂತರ ಚುನಾವಣೆಗಳಲ್ಲಿ ಆಡಳಿತ ಕಾಂಗ್ರೆಸ್ ಪಕ್ಷವು ಕಮ್ಯುನಿಸ್ಟರು ಅಥವಾ ಮುಸ್ಲಿಂ ಲೀಗಿನ ಜತೆ ಸೇರದೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಘೋಷಿಸಿ, ಪಕ್ಷವು ತನ್ನ ಧೋರಣೆ ಮತ್ತು ಕಾರ್ಯಕ್ರಮಗಳಿಗೆ ಬೆಂಬಲವಾಗಿ ಹೊಸ ಆದೇಶ ಪಡೆಯಲು ಸ್ವಶಕ್ತಿಯಿಂದ ಜನರ ಮುಂದೆ ನಿಲ್ಲುವುದೆಂದರು.
ತಮ್ಮ ನಿವಾಸದ ಸಮೀಪದಲ್ಲಿ ಸುಮಾರು 2,000 ಜನರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
ಪಟೌಡಿ ವಿರುದ್ಧ ಲಾಲಾ
ನವದೆಹಲಿ, ಜ. 10– ಭಾರತದ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ ಆಗಿದ್ದ ಲಾಲಾ ಅಮರನಾಥ್ ಅವರು ಪಟೌಡಿ ನವಾಬ್ ವಿರುದ್ಧ ಹರಿಯಾಣದ ಗುರುಗಾಂವ್ ಕ್ಷೇತ್ರದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಸಂಭವವಿದೆ.
ಲಾಲಾ ಅಮರನಾಥ್ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬಹುದೆಂದು ಈ ಮೂಲಗಳು ಹೇಳಿವೆ. ಪಟೌಡಿಯವರು ವಿಶಾಲ ಹರಿಯಾಣ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶುಕ್ರವಾರ ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.