ಶೀಘ್ರದಲ್ಲೇ ತೆಲಂಗಾಣ– ಆಂಧ್ರ ಎಂ.ಪಿ.ಗಳ ಸಭೆ
ಹೈದರಾಬಾದ್, ಜ. 28– ಆಂಧ್ರ ವಿಭಾಗದ ಇಬ್ಬರು ಪ್ರತ್ಯೇಕವಾದಿ ಸಂಸತ್ ಸದಸ್ಯರು ಶನಿವಾರ ರಾತ್ರಿ ತೆಲಂಗಾಣ ನಾಯಕ ಡಾ. ಎಂ. ಚೆನ್ನಾರೆಡ್ಡಿ ಅವರನ್ನು ಭೇಟಿ ಮಾಡಿ ರಾಜ್ಯ ವಿಭಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಆಂಧ್ರ ಮತ್ತು ತೆಲಂಗಾಣ ವಿಭಾಗಗಳ ಸಂಸತ್ ಸದಸ್ಯರ ಸಂಯುಕ್ತ ಸಭೆ ಏರ್ಪಡಿಸುವ ಬಗ್ಗೆ ಮಾತುಕತೆ ನಡೆಸಿದರೆಂದು ತಿಳಿದುಬಂದಿದೆ.
ಚೆನ್ನಾರೆಡ್ಡಿಯವರು ಅಧ್ಯಕ್ಷರಾಗಿರುವ ಪ್ರತ್ಯೇಕ ತೆಲಂಗಾಣ ಕಾಂಗ್ರೆಸ್ ವೇದಿಕೆ ಫೆಬ್ರುವರಿ 1ರಂದು ಸಭೆ ಸೇರಿ ಈ ಸಲಹೆಯನ್ನು ಚರ್ಚಿಸಲಿದೆಯೆಂದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.