ಭಾರತವೇ ಪರಿಹಾರ ನೀಡಬೇಕೆಂದು ಪಾಕಿಸ್ತಾನದ ಒತ್ತಾಯ
ನವದೆಹಲಿ, ಫೆ. 13– ಭಾರತದ ಪ್ರದೇಶದ ಮೇಲೆ ಯಾನ ಮಾಡುವುದನ್ನು ನಿಷೇಧಿಸಿರುವುದರಿಂದ ತನ್ನ ವಿಮಾನಗಳ ಯಾನದ ವೆಚ್ಚ ಹೆಚ್ಚಿರುವುದರ ಕಾರಣ ತನಗೇ ಪರಿಹಾರ ಕೊಡಬೇಕೆಂದು ಪಾಕಿಸ್ತಾನವು ಇಂದು ಭಾರತವನ್ನು ಕೇಳಿದೆ.
ವಿಮಾನ ನಾಶಪಡಿಸಿರುವುದಕ್ಕೆ ಪರಿಹಾರ ಕೊಡಬೇಕೆಂಬ ಭಾರತದ ಬೇಡಿಕೆಯಿಂದ ಜಾರಿಕೊಳ್ಳುವುದೇ ಪಾಕಿಸ್ತಾನದ ಈ ಬೇಡಿಕೆಯ ಉದ್ದೇಶವಾಗಿದೆ.
ಇಸ್ಲಾಮಾಬಾದಿನಲ್ಲಿರುವ ವಿದೇಶಾಂಗ ಕಚೇರಿಗೆ ಭಾರತೀಯ ಹೈಕಮೀಷನರ್ ಶ್ರೀ ಬಿ.ಕೆ. ಆಚಾರ್ಯ ಅವರನ್ನು ಕರೆಸಿ ನೀಡಿದ ಪತ್ರದಲ್ಲಿ ಪಾಕಿಸ್ತಾನ ಸರ್ಕಾರವು ವಿಮಾನಯಾನದ ಪ್ರಶ್ನೆಯನ್ನು ಸೌಹಾರ್ದ ಹಾಗೂ ಸಂಧಾನದ ಮೂಲಕ ಇತ್ಯರ್ಥಪಡಿಸಬೇಕೆಂಬ ತನ್ನ ಕೋರಿಕೆಯನ್ನು ಪುನರುಚ್ಚರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.