ADVERTISEMENT

50 ವರ್ಷಗಳ ಹಿಂದೆ| ಮಂಗಳವಾರ 28.12.1971

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 19:30 IST
Last Updated 27 ಡಿಸೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಭಾರತದ ಕದನವಿರಾಮ ಅಮೆರಿಕದ ವಿಚಿತ್ರ ಅರ್ಥಕಲ್ಪನೆ: ಇಂದಿರಾ

ನ್ಯೂಯಾರ್ಕ್, ಡಿ. 27– ಇತ್ತೀಚಿನ ಭಾರತ– ಪಾಕಿಸ್ತಾನ ಸಮರದಲ್ಲಿ ಭಾರತವು ರಷ್ಯಾದ ಒತ್ತಡಕ್ಕೆ ಮಣಿದು ಕದನವಿರಾಮ ಜಾರಿಗೆ ತಂದಿತೆಂಬ ಅಮೆರಿಕದ ಸಲಹೆಯನ್ನು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ವಿಚಿತ್ರ ಹಾಗೂ ಅರ್ಥಹೀನ ಎಂದು ತಳ್ಳಿಹಾಕಿದರು.

‘ನಾನು ಯಾರೊಬ್ಬರ ಅಥವಾ ಯಾವುದೇ ರಾಷ್ಟ್ರದ ಒತ್ತಡಕ್ಕೆ ಮಣಿಯು ವವಳಲ್ಲ’ ಎಂದು ಅವರು ಟೈಂ ಮತ್ತು ನ್ಯೂಸ್ ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲಿ ಘೋಷಿಸಿದ್ದಾರೆ.

ADVERTISEMENT

ಬಾಂಗ್ಲಾ ಸಂಪುಟದ ವಿಸ್ತರಣೆ: ಐವರು ಹೊಸ ಸಚಿವರ ನೇಮಕ

ಢಾಕಾ, ಡಿ. 27– ತಾಜುದ್ದೀನ್ ನೇತೃತ್ವದ ಬಾಂಗ್ಲಾದೇಶ ನಾಲ್ವರು ಸದಸ್ಯರ ಸಂಪುಟಕ್ಕೆ ಇಂದು ಐವರು ಹೊಸ ಸಚಿವರನ್ನು ಸೇರಿಸಿಕೊಂಡು ವಿಸ್ತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.