ದೇವಾಲಯಗಳ ಮುಂದೆ ‘ಪೆರಿಯಾರ್’ ಪಿಕೆಟಿಂಗ್
ಮದ್ರಾಸ್, ಮೇ 28– ‘ಸಾಮಾಜಿಕ ವ್ಯಾಧಿಗಳ’ ನಿವಾರಣೆ ಮತ್ತು ‘ಕಂದಾಚಾರದ’ ನಿರ್ಮೂಲನ ಕ್ಕಾಗಿ ತಮಿಳುನಾಡಿನ ಏಳು ಮುಖ್ಯ ದೇವಾಲಗಳ ಪೈಕಿ ಆರರ ಮುಂದೆ ‘ಅಹಿಂಸಾತ್ಮಕ’ ಪಿಕೆಟಿಂಗ್ ಸಂಘಟಿಸುವುದಾಗಿ ದ್ರಾವಿಡಕಳಗಂ ನಾಯಕ ಇ.ವಿ.ರಾಮಸ್ವಾಮಿ ನಾಯಕರ್ ಅವರು ಇಂದು ಪ್ರಕಟಿಸಿದರು.
‘ವಿಚಾರವಾದಿಗಳ ವೇದಿಕೆಯ’ ಸಮ್ಮೇಳನದ ಮುಕ್ತಾಯಅಧಿವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವು ಯಾವ ದಿನದಿಂದ ಚಳವಳಿ ಹೂಡುವರೆಂಬುದನ್ನು ತಿಳಿಸಲಿಲ್ಲವಾದರೂ ಇದಕ್ಕಾಗಿ ಆರು ತಿಂಗಳ ಕಾರ್ಯಕ್ರಮ ರೂಪಿಸಿ ನಾಯಕತ್ವ ವಹಿಸುವುದಾಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.