ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಗುರುವಾರ 23.1.1997

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 15:48 IST
Last Updated 22 ಜನವರಿ 2022, 15:48 IST
   

ರಾಜಸ್ಥಾನ: ಸದನದಲ್ಲಿ ಮಾರಾಮಾರಿ, ಸಮಾಜ ಕಲ್ಯಾಣ ಸಚಿವ ಮದನ್ ದಿಲ್ವಾರಗೆ ಕಪಾಳ ಮೋಕ್ಷ

ಜೈಪುರ, ಜ. 22 (ಪಿಟಿಐ)– ಅಮಾನತುಗೊಂಡಿದ್ದ ಭಾರತೀಯ ಜನತಾ ಪಕ್ಷದ ಭಿನ್ನಮತೀಯ ಶಾಸಕ ಗೋಪಿಚಂದ್ ಗುರ್ಜಾರ್ ಅವರು, ಸಮಾಜ ಕಲ್ಯಾಣ ಸಚಿವ ಮದನ್ ದಿಲ್ವಾರ ಅವರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ರಾಜಸ್ಥಾನ ವಿಧಾನಸಭೆಯಲ್ಲಿ ಇಂದು ನಡೆಯಿತು.

ಸದನದಲ್ಲಿ ನಡೆದ ಕೋಲಾಹಲ, ಮಾರಾಮಾರಿ ಘಟನೆಗಳ ಹಿನ್ನೆಲೆಯಲ್ಲಿ ಇಂದು ಮೂರು ಬಾರಿ ಮುಂದೂಡಲಾಗಿದ್ದ ವಿಧಾನಸಭೆಯನ್ನು ಅಂತಿಮ ವಾಗಿ ಮಾರ್ಚ್ 6ರವರೆಗೆ ಮುಂದೂಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.