ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ 15–7–1971

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 19:30 IST
Last Updated 14 ಜುಲೈ 2021, 19:30 IST
   

‘ಸ್ವಂತ ಆಸ್ತಿ ಎಂಬಂತೆ ವರ್ತನೆ’: ಕಾರ್ಪೊರೇಷನ್ ಆಡಳಿತ ಕುರಿತು ರಾಜ್ಯಪಾಲರಿಗೆ ದೂರು

ಬೆಂಗಳೂರು, ಜುಲೈ 14– ಮೇಯರ್ ಶ್ರೀ ಚ. ಲಿಂಗಯ್ಯ ಮತ್ತು ಆಡಳಿತ ಪಕ್ಷದ ನಾಯಕ ಶ್ರೀ ಎಂ.ವಿ. ತಿವಾರಿ ಅವರು ನಗರ ಕಾರ್ಪೊರೇಷನ್ ‘ತಮ್ಮ ಸ್ವಂತ ಆಸ್ತಿ ಎಂಬಂತೆ ವರ್ತಿಸಿ’ ಅಧಿಕಾರಿಗಳ ವರ್ಗಾವಣೆ ಮೊದಲಾದ ವಿಚಾರಗಳಲ್ಲಿ ಹಸ್ತಕ್ಷೇಪ ನೆಡಸುತ್ತಿರುವರೆಂದೂ, ಆಡಳಿತ ಪಕ್ಷದವರೂ ಅದಕ್ಕೆ ಪಾಲುದಾರರಾಗಿದ್ದು ಆಡಳಿತದಲ್ಲಿ ಅನೈತಿಕತೆ ಹೆಚ್ಚಿದೆಯೆಂದೂ, ಹಣ ಮತ್ತಿತರ ಪ್ರಭಾವದ ಹಾವಳಿ ಹೆಚ್ಚಾಗಿದೆಯೆಂದೂ, ಹತ್ತು ಮಂದಿ ವಿರೋಧ ಪಕ್ಷದ ಕಾರ್ಪೊರೇಟರುಗಳು ರಾಜ್ಯಪಾಲ ಶ್ರೀ ಧರ್ಮವೀರ್ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಎಂಜಿನಿಯರಿಂಗ್ ಇಲಾಖೆಯಲ್ಲಿ ಆಗಿರುವ ವರ್ಗಾವಣೆಗಳನ್ನು ಪರಿಶೀಲಿಸಿದಲ್ಲಿ ಅದು ವೇದ್ಯವಾಗುತ್ತದೆಯೆಂದು ದೂರಿನಲ್ಲಿ ತಿಳಿಸಿದ್ದಾರೆ ಎಂದುಕಮಿಷನರ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.