l ಉದ್ಯೋಗದಿಂದ ವಾರ್ಷಿಕ 12,000 ರೂ. ಆದಾಯದವರು ಜಮೀನು ಹೊಂದಲು ಅಸಾಧ್ಯ
ಬೆಂಗಳೂರು, ಜು. 6 – ಸರ್ಕಾರ ನಿರ್ಧರಿಸಿರುವಂತೆ ಬೇರೆ ಕಾಯಂ ಉದ್ಯೋಗದಿಂದ 12,000 ರೂ. ಗಿಂತ ಹೆಚ್ಚು ವಾರ್ಷಿಕ ವರಮಾನ ಬರುವವರು ವ್ಯವಸಾಯ ಜಮೀನನ್ನು ಹೊಂದಲು ಸಾಧ್ಯವಾಗದು.
ಇಂದು ನಡೆದ ಮಂತ್ರಿಮಂಡಲದ ಸಭೆ ಈ ವಿಧಿಯನ್ನು ಭೂ ಸುಧಾರಣೆಗಳ ವಿಧೇಯಕದಲ್ಲಿ ಅಳವಡಿಸಲು ತೀರ್ಮಾನಿಸಿತು.
ಭೂ ಸುಧಾರಣೆಗಳ ಬಗ್ಗೆ ಕಾಂಗ್ರೆಸ್ ರಚಿಸಿದ್ದ ಸಮಿತಿಯ ಶಿಫಾರಸು ಇದು. ಇದನ್ನು ಮಂತ್ರಿಮಂಡಲ ಅಂಗೀಕರಿಸಿದೆ.
ಮುಖ್ಯಮಂತ್ರಿ ಶ್ರೀ ಅರಸು ಅವರು ಪ್ರತಿಪಾದಿಸಿರುವ ‘ಒಂದು ಉದ್ಯೋಗ, ಒಂದು ವೃತ್ತಿ’ಯ ತತ್ವವೂ ಈ ನಿರ್ಧಾರದಲ್ಲಿ ಅಡಗಿದೆ.
ಸ್ವಂತ ವ್ಯವಸಾಯ ಮಾಡುವವರು ಜಮೀನಿನ 10 ಮೈಲಿ ಫಾಸಲೆಯೊಳಗೆ ವಾಸ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.