ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಬುಧವಾರ 19.1.1972

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 15:10 IST
Last Updated 18 ಜನವರಿ 2022, 15:10 IST
   

ಪೂರ್ಣ ಆರ್ಥಿಕ ಸ್ವರಾಜ್ಯ: ಕೇಂದ್ರ, ರಾಜ್ಯಗಳಲ್ಲಿ ಸುಭದ್ರ ಸರ್ಕಾರ

ನವದೆಹಲಿ, ಜ. 18– ಬಲವಾದ ಕೇಂದ್ರಕ್ಕೆ ಹೊಂದಿಕೆಯಾಗಿ ರಾಜ್ಯಗಳಲ್ಲಿ ದೃಢ ಸರ್ಕಾರಗಳನ್ನು ರಚಿಸಿ, ಬಡತನದ ವಿರುದ್ಧ ಹೋರಾಟವನ್ನು ಮುಂದುವರಿಸಿ ಪೂರ್ಣ ಆರ್ಥಿಕ ಸ್ವರಾಜ್ಯವನ್ನು ಯಶಸ್ವಿಯಾಗಿ ಸಾಧಿಸುವುದೆಂದು ಕಾಂಗ್ರೆಸ್‌ ಪಕ್ಷ ಇಂದು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವಚನ ವಿತ್ತಿದೆ.

ಕೇಂದ್ರ ಹಾಗೂ ರಾಜ್ಯಗಳಲ್ಲಿ ದೃಢ ಸರ್ಕಾರಗಳನ್ನು ಒದಗಿಸಬಹುದಾದ ಏಕೈಕ ಪಕ್ಷ ಕಾಂಗ್ರೆಸ್‌, ಆದ್ದರಿಂದ ತನ್ನ ಅಭ್ಯರ್ಥಿಗಳಿಗೆ ಮಾರ್ಚ್‌ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳಲ್ಲಿ ಮತ ನೀಡಬೇಕೆಂದು ಚುನಾವಣಾ ಪ್ರಣಾಳಿಕೆ ಮತದಾರರಿಗೆ ಕರೆಯಿತ್ತಿದೆ.

ADVERTISEMENT

ರಾಜ್ಯ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಗಳಿಗೆ ಪಕ್ಷವು ಸಿದ್ಧಪಡಿಸಿರುವ ಹದಿನಾರು ಪುಟಗಳ ದಶಾಂಶ ಕಾರ್ಯಕ್ರಮದ ಪ್ರಣಾಳಿಕೆಯನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಜೀತ್‌ ಯಾದವ್‌ ಶಂಕರದಯಾಳ್‌ ಶರ್ಮ ಅವರು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.