ADVERTISEMENT

ಮಂಗಳವಾರ, 20–6–1995

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 19:31 IST
Last Updated 19 ಜೂನ್ 2020, 19:31 IST

ರಾಜ್ಯದಲ್ಲಿ ಶೀಘ್ರ ನೈರುತ್ಯ ರೈಲ್ವೆ ವಲಯ

ಬೆಂಗಳೂರು, ಜೂನ್‌ 19– ಕರ್ನಾಟಕವನ್ನು ದಕ್ಷಿಣ ರೈಲ್ವೆ ವಲಯದಿಂದ ಬೇರ್ಪಡಿಸಿ ರಾಜ್ಯಕ್ಕೇ ಪ್ರತ್ಯೇಕವಾದ ದಕ್ಷಿಣ– ಪಶ್ಚಿಮ ರೈಲ್ವೆ ವಲಯ ರಚಿಸಲು ತೀರ್ಮಾನಿಸಿದ್ದು, ಹೊಸ ರೈಲ್ವೆ ವಲಯ ಅತಿ ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ ಎಂದು ರೈಲ್ವೆ ಸಚಿವ ಸಿ.ಕೆ.ಜಾಫರ್‌ ಷರೀಫ್‌ ಅವರು ಇಂದು
ಇಲ್ಲಿ ಪ್ರಕಟಿಸಿದರು.

ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯ ರಚಿಸಬೇಕೆಂಬ ಬೇಡಿಕೆಯನ್ನು ತಾವು ಒಪ್ಪಿದ್ದು, ಉದ್ದೇಶಿತ ದಕ್ಷಿಣ– ಪಶ್ಚಿಮ ರೈಲ್ವೆ ವಲಯ ರಚನೆಗೆ ಬೇಕಾದ ಅಗತ್ಯ ಹಣಕಾಸಿನ ವ್ಯವಸ್ಥೆಯನ್ನು ಪ್ರಸ್ತುತ ಸಾಲಿನ ರೈಲ್ವೆ ಮುಂಗಡ ಪತ್ರದಲ್ಲೇ ಒದಗಿಸಿರುವುದಾಗಿ ಅವರು ಹೇಳಿದರು.

ADVERTISEMENT

ಹಿಂದುಳಿದ ವರ್ಗದವರಿಗೆ ಶಾಶ್ವತ ಆಯೋಗ

ಬೆಂಗಳೂರು, ಜೂನ್‌ 19– ಹಿಂದುಳಿದ ವರ್ಗದವರ ಶಾಶ್ವತ ಆಯೋಗ ಸ್ಥಾಪಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಆಯೋಗಕ್ಕೆ ಸೂಕ್ತ ಆಯುಕ್ತರನ್ನು ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ.

ಹಿಂದಿನ ಸರ್ಕಾರವು ಆಯೋಗವನ್ನು ರಚಿಸಿತ್ತಾದರೂ ಅದು ಕೆಲಸ ಆರಂಭಿಸಿಯೇ ಇಲ್ಲ ಎಂದು ಸಂಪುಟ ಸಭೆಯ ನಂತರ ವಾರ್ತಾ ಸಚಿವ ಎಂ.ಸಿ.ನಾಣಯ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.