‘ಸಿ.ಎಂ.ಗೆ ತಿಂದ ಅನ್ನ ಅರಗುವುದಿಲ್ಲ’ (ಪ್ರ.ವಾ., ಮಾರ್ಚ್ 12).
ಬಿಜೆಪಿಯನ್ನು ಟೀಕಿಸದಿದ್ದರೆ, ‘ಸಿದ್ದರಾಮಯ್ಯನವರಿಗೆ ತಿಂದ ಅನ್ನ ಅರಗುವುದಿಲ್ಲ!’ ಎಂದು ಕೆ.ಎಸ್. ಈಶ್ವರಪ್ಪನವರ ಟೀಕೆ.
ನಿಜವಾಗಿದ್ದರೆ, ಇದು ‘ಅನ್ನಭಾಗ್ಯ’ವನ್ನು ಜಾರಿಗೆ ತಂದುದರ (ಕರ್ಮ) ಫಲವೇ ಸರಿ! ರಾಗಿಮುದ್ದೆಯನ್ನು ತಿಂದರೂ ಅರಗುವುದಿಲ್ಲವೆ, ಈಶ್ವರಪ್ಪನವರೆ? (‘ಮುದ್ದೆ ಭಾಗ್ಯ’ ಇಲ್ಲವಲ್ಲ!)
ತಾವು ಇನ್ನೂ ‘ಗಟ್ಟಿ ಮುಟ್ಟಾಗಿ’ರುವುದಾಗಿ ಒಂದೆಡೆ ಹೇಳಿಕೊಂಡಿದ್ದಾರೆ, ಸಿದ್ದರಾಮಯ್ಯ. ಆದ್ದರಿಂದ ಅವರು ಕಲ್ಲು ತಿಂದು ಬೇಕಾದರೂ ಅರಗಿಸಿಕೊಳ್ಳಬಲ್ಲರು! (ಅಂದಹಾಗೆ, ‘ಅನ್ನಭಾಗ್ಯ’ದ ಅಕ್ಕಿಯಲ್ಲಿ ಬಹಳಷ್ಟು ಕಲ್ಲುಗಳು ಎಂದು ದೂರು: ಕಾಳಿಗೊಂದು ಕಲ್ಲು?)
– ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.