ಅಲ್ಲಿ ಲೆನಿನ್ ಪ್ರತಿಮೆಯನ್ನು
ಕೇಕೆಗಳ ನಡುವೆ ಧರೆಗುರುಳಿಸಿದರು
ಆದರೆ, ಆತ ಗಟ್ಟಿಯಾಗಿ ನಿಂತಿದ್ದಾನೆ
ಪಠ್ಯಪುಸ್ತಕಗಳ ಪುಟಪುಟಗಳಲ್ಲಿ
ಗ್ರಂಥಾಲಯಗಳ ಕಪಾಟುಗಳಲ್ಲಿ!
ಗಾಂಧಿ, ಪೆರಿಯಾರ್, ಅಂಬೇಡ್ಕರರ
ಪ್ರತಿಮೆಗಳನ್ನು ಉರುಳಿಸಬಹುದು;
ಚಿಂತನೆಗಳನ್ನು ಅಳಿಸಲಾದೀತೆ?
ನೆನಪಿರಲಿ,
ಮಹಾತ್ಮರು ಬದುಕಿರುವುದು ಪ್ರತಿಮೆಗಳಲ್ಲಲ್ಲ
ಜನರ ಹೃದಯ ಮಂದಿರಗಳಲ್ಲಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.