ಕೇರಳದ ಕಣ್ಣೂರ ಜಿಲ್ಲೆ ಶಾಲೆಯೊಂದರಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ಮೇಲೆ ಅವಳ ತಂದೆ, ಚಿಕ್ಕಪ್ಪ ಹಾಗೂ ಹದಿನೈದು ವರ್ಷದ ಸಹೋದರ ಎರಡು ವರ್ಷಗಳಿಂದ ಅತ್ಯಾಚಾರವೆಸಗುತ್ತಿದ್ದಾರೆ ಎಂಬುದನ್ನು ತಿಳಿದಾಗ (ಪ್ರ.ವಾ. ನ. 27) ತಲೆತಗ್ಗಿಸುವಂತಾಯಿತು.
ಅಪರಾಧಿಗಳಿಗೆ ಶೀಘ್ರವಾಗಿ ಕಠೋರ ಶಿಕ್ಷೆಯಾಗಬೇಕು. ಬಾಲಕಿಗೆ ರಕ್ಷಣೆ, ಆಶ್ರಯ ದೊರೆಯಬೇಕು. ಇನ್ನು ಮುಂದೆ ಇಂತಹ ಅಸಹ್ಯ, ಅಸಭ್ಯ, ಅಸಂಸ್ಕೃತ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಸಮಾಜದ್ದಾಗಿರಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.