ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ಕಾರಿ ಕಚೇರಿಗಳು ಮಧ್ಯಾಹ್ನ 1.30ರ ನಂತರ ಕಾರ್ಯ ನಿರ್ವಹಿಸುವುದಿಲ್ಲ. ಈ ಅವಧಿಯಲ್ಲಿ ಬಿಸಿಲು ಮತ್ತು ಸೆಖೆ ಜಾಸ್ತಿ ಎಂಬ ಕಾರಣದಿಂದ ರಾಜ್ಯ ಸರ್ಕಾರ ತನ್ನ ನೌಕರರಿಗೆ ವಿಶೇಷ ವಿನಾಯಿತಿ ನೀಡಿದೆ. ಆದರೆ ಈ ಸೌಲಭ್ಯ ಕೇಂದ್ರ ಸರ್ಕಾರಿ ಕಚೇರಿಗಳು, ಉದ್ದಿಮೆಗಳು, ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್ಗಳ ಉದ್ಯೋಗಿಗಳಿಗೆ ಇಲ್ಲ! ಅವರು ಮನುಷ್ಯರಲ್ಲವೇ?
ಬೆಳಗಿನ ಅವಧಿಯಲ್ಲಿ ಬಹಳಷ್ಟು ನೌಕರರು ಸರಿಯಾಗಿ ಸೇವೆ ಸಲ್ಲಿಸುವುದಿಲ್ಲ. ಅನೇಕರು ರೂಢಿಯಂತೆ 10-30ಕ್ಕೆ ಕಚೇರಿಗೆ ಬಂದು 1.30 ಕ್ಕೆ ಮನೆಗೆ ಹೋಗುತ್ತಾರೆ. ಕಚೇರಿ ಕೆಲಸಗಳಿಗಾಗಿ ದೂರದ ಹಳ್ಳಿಗಳಿಂದ ಜನ ಬರುಷ್ಟರಲ್ಲಿ ಅವು ಬಾಗಿಲು ಮುಚ್ಚಿರುತ್ತವೆ.
ದುರದೃಷ್ಟದ ಸಂಗತಿ ಎಂದರೆ ಬಿಸಿಲು,ಮಳೆ ಲೆಕ್ಕಿಸದೆ ಹೊಲಗದ್ದೆಗಳಲ್ಲಿ ರೈತರು , ಕಾರ್ಮಿಕರು ದುಡಿಯುತ್ತಾರೆ. ಕಚೇರಿಗಳಲ್ಲಿ ಫ್ಯಾನ್ ಕೆಳಗೆ ಕೆಲಸ ಮಾಡುವ ನೌಕರಿಗೆ ಮಾತ್ರ ಬಿಸಿಲಿನ ತಾಪವೇ? ಇದೆಂಥ ತಾರತಮ್ಯ? ಸರ್ಕಾರಿ ನೌಕರರನ್ನು ಜೋಲಿಯಲ್ಲಿ ಹಾಕಿ ಲಾಲಿ ಹಾಡುವ ಇಂತಹ ವಿನಾಯಿತಿಗಳು ಇನ್ನೆಷ್ಟು ದಿನ ಮುಂದುವರೆಯಬೇಕು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.