ADVERTISEMENT

ಉಂಡು ಹೊರಬಂದವರು!

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST

ಮೋದಿ ಸಂಪುಟದಲ್ಲಿದ್ದ ಟಿಡಿಪಿಯ ಇಬ್ಬರು ಸಚಿವರ ರಾಜೀನಾಮೆ ಕೊಡಿಸಿರುವ ಎನ್. ಚಂದ್ರಬಾಬು ನಾಯ್ಡು ಅವರ ನಿರ್ಧಾರವು ಅವರ ಸ್ವಾರ್ಥ ಚಿಂತನೆಯನ್ನು ಸೂಚಿಸುತ್ತದೆ.

ಒಂದು ಸಮಾರಂಭಕ್ಕೆ ಬೆಂಬಲ ಸೂಚಿಸಿ, ತಾನು ಹಾಗೂ ತನ್ನವರೆಲ್ಲರೂ ಅಲ್ಲಿಯ ಭೋಜನ ಕೂಟದಲ್ಲಿ ಪೊಗದಸ್ತಾಗಿ ಉಂಡು, ಮೊಸರನ್ನ ಬರುವ ಸಮಯದಲ್ಲಿ, ‘ನನಗೆ ಹಾಗೂ ನನ್ನ ಮನೆಯವರಿಗೆ ಸರಿಯಾದ ಊಟವನ್ನು ಕೊಡಲಿಲ್ಲ’ ಎಂದು ಸಿಟ್ಟು ಮಾಡಿಕೊಂಡು ಹೊರಡುವವರ ಹಾಗಿದೆ ಈ ನಿರ್ಧಾರ. ನಾಯ್ಡು ಅವರಂಥ ಅನುಭವಿ ರಾಜಕಾರಣಿ ಇಂಥ ರಾಜಕೀಯ ಮಾಡಬಾರದಿತ್ತು.
-ಬಿ. ಭಾರ್ಗವರಾಮ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT