ವಾರ್ಡ್ ನಂ. 43, ನಂದಿನಿ ಲೇಔಟ್ ಸುಂದರವಾದ ಉದ್ಯಾನ. ಸಾವಿರಾರು ಮಂದಿ ವಾಯುವಿಹಾರಕ್ಕೆ ಬರುತ್ತಾರೆ. ಆದರೆ ಕಳೆದ ಆರು ತಿಂಗಳಿನಿಂದ ಬೋರ್ನಲ್ಲಿ ನೀರಿಲ್ಲದೆ ಉದ್ಯಾನ ಸಂಪೂರ್ಣವಾಗಿ ನಾಶವಾಗಿದೆ. ಇಲಾಖೆ (ಬಿಬಿಎಂಪಿ) ಇದರ ಬಗ್ಗೆ ಗಮನಹರಿಸುತ್ತಿಲ್ಲ.
ನಂದಿನಿ ಲೇಔಟ್ ವ್ಯಾಪ್ತಿಯಲ್ಲಿರುವ ಆಕ್್ಸಫರ್ಡ್ ಶಾಲೆಯ ಮುಂಭಾಗದಲ್ಲಿರುವ ಉದ್ಯಾನದಲ್ಲಿ ಹತ್ತಾರು ಕಡೆ ತಂತಿ ಬೇಲಿ ಕಿತ್ತುಹೋಗಿದೆ. ಹಾಗಾಗಿ ಅದೀಗ ಆಟದ ಮೈದಾನವಾಗಿದೆ. ಒಂದು ವರ್ಷದಿಂದ ಮುಖ್ಯಮಂತ್ರಿ, ಬಿಬಿಎಂಪಿ ಅಧಿಕಾರಿಗಳಿಗೆ ತುರ್ತಾಗಿ ಗಮನಹರಿಸಲು ಕೋರಿದರೂ ಯಾವ ಕೆಲಸವೂ ಆಗುತ್ತಿಲ್ಲ. ಸಂಬಂಧಪಟ್ಟವರು ಕೂಡಲೇ ದುರಸ್ತಿಪಡಿಸಲಿ.
–ರಾಮಚಂದ್ರರಾವ್ ಎನ್.ವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.