‘ಔರಂಗಜೇಬನ ವೈಭವೀಕರಣಕ್ಕೆ ಯಾರು ಕಾರಣ?’ (ಪ್ರ.ವಾ., ಮಾ. 1) ಲೇಖನದಲ್ಲಿ ಔರಂಗಜೇಬನ ಮತಾಂಧತೆ ಹಾಗೂ ದಾರಾ ಶಿಕೋನ ತಾತ್ವಿಕ ಸಮನ್ವಯದ ಬಗ್ಗೆ ಪ್ರಸ್ತಾಪಿಸಿರುವ ಅಂಶಗಳು ಬಹಳಷ್ಟು ಜನರ ಕಣ್ತೆರೆಸಲಿವೆ.
ಔರಂಗಜೇಬನ ಬದಲು ಒಂದು ವೇಳೆ ದಾರಾ ಶಿಕೋ ರಾಜ್ಯಭಾರ ಮಾಡಿದ್ದರೆ, ಭಾರತದ ಚರಿತ್ರೆಯು ಬಹಳಷ್ಟು ಧಾರ್ಮಿಕ ದೌರ್ಜನ್ಯಗಳಿಂದ ಹೊರತಾಗಿರುತ್ತಿತ್ತು.
ಇಂದಿಗೂ ಬುದ್ಧಿಜೀವಿಗಳ ಒಂದು ವರ್ಗವು ಕೇವಲ ಓಲೈಕೆಯ ಮನಸ್ಥಿತಿಯಿಂದ ಔರಂಗಜೇಬನ ಮತಾಂಧತೆಯ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಅಲ್ಲದೇ ಆತನ ಸಮರ್ಥನೆಗೆ ಮುಂದಾಗಿದೆ. ಇದು ವಿಷಾದನೀಯ.
–ಡಾ. ಜ್ಞಾನೇಶ್ವರ ಕೆ.ಬಿ., ಹುಬ್ಬಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.