ADVERTISEMENT

ಕಂದಕ ಮುಚ್ಚಿ ಅನಾಹುತ ತಪ್ಪಿಸಿ

ಆದಿಮುನಿ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಹೊಸೂರು ಮುಖ್ಯರಸ್ತೆಯ ಧರ್ಮಾರಾಂ ಅಂಚೆ ಕಚೇರಿಯ ಪಕ್ಕದ ಮಹಿಳಾ ಆರ್‌ವಿಟಿಐ ಮುಂಭಾಗದ ರಸ್ತೆಯಲ್ಲಿ ಸುಮಾರು ಅರ್ಧ ಅಡಿಗಿಂತಲೂ ಅಗಲವಾದ ಒಂದು ಕಂದಕವಿದೆ. ಭಾರಿ ವಾಹನಗಳ ಸಂಚಾರದಿಂದಾಗಿ ದಿನೇ ದಿನೆ ಇದು ಇನ್ನಷ್ಟು ಹೆಚ್ಚು ಆಳವಾಗುತ್ತಿದೆ.

ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ? ಈಗ ಆ ಕಂದಕ ಸುಮಾರು ಒಂದೂವರೆ ಅಡಿಯಷ್ಟು ಉದ್ದ- ಅಗಲಕ್ಕೆ ವಿಸ್ತರಣೆಗೊಂಡಿದೆ. ಆದ್ದರಿಂದ ತಕ್ಷಣ ಕಂದಕವನ್ನು ಮುಚ್ಚಿ ವಾಹನಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಲ್ಲಿ ಅನಾಹುತಗಳನ್ನು ತಪ್ಪಿಸಬಹುದು.
– -ಆದಿಮುನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT