
ಪ್ರಜಾವಾಣಿ ವಾರ್ತೆಉತ್ತರಹಳ್ಳಿ, ನೇತಾಜಿ ರಸ್ತೆಯ 3ನೇ ಮುಖ್ಯರಸ್ತೆಯಲ್ಲಿ ಕಸ ಸಂಗ್ರಹಣೆ ಸಮರ್ಪಕವಾಗಿಲ್ಲ. ಪಾಲಿಕೆ ವಾಹನ ಬಂದರೂ ಎಲ್ಲಿಯೋ ಒಂದು ಕಡೆ ನಿಂತಿರುತ್ತದೆ. ಇದರಿಂದಾಗಿ ಇಲ್ಲಿಯ ಸುತ್ತಮುತ್ತಲಿನ ನಾಗರಿಕರಿಗೆ ತೊಂದರೆಯಾಗುತ್ತದೆ. ಮಹಿಳೆಯರು ಕಸ ತೆಗೆದುಕೊಂಡು ಹೋಗಿ ದೂರ ಎಸೆದು ಬರುವ ಪರಿಸ್ಥಿತಿಯಿದೆ.
ಹೊಸ ಅಪಾರ್ಟ್ಮೆಂಟ್ಗಳ ಕಟ್ಟಡಗಳಿಂದಲೂ ದೂಳು ಬರುತ್ತಿದೆ. ಆದ್ದರಿಂದ ಸ್ವಚ್ಛತಾ ವಾಹಿನಿಯು ಪ್ರತಿ ರಸ್ತೆಯ ಪ್ರಾರಂಭದಿಂದ ಕೊನೆಯವರೆಗೂ ಬಂದು ಕಸ ಸಂಗ್ರಹಿಸಿ ಹೋಗುವಂತೆ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗೆ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಕೋರಲಾಗಿದೆ.
–ಜೆ.ಆರ್.ಎ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.