ADVERTISEMENT

ಕಾಂಕ್ರೀಟ್ ಸ್ಥಾವರ ಬೇಕೇ?

ನಾಗಾರ್ಜುನ ಸಾಗ್ಗೆರೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ತುಮಕೂರು ಜಿಲ್ಲೆಯ ಸಿದ್ಧಗಂಗೆಯಲ್ಲಿ 121 ಅಡಿ ಎತ್ತರ ಶಿವಲಿಂಗ ಸ್ಥಾಪನೆಗೆ ಶಿವಕುಮಾರ ಸ್ವಾಮಿಗಳು ಒಪ್ಪಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ (ಪ್ರ. ವಾ. ಫೆ. 2).

`ಸ್ಥಾವರಕ್ಕಳಿವುಂಟು - ಜಂಗಮಕ್ಕಳಿವಿಲ್ಲ~ ಎಂಬ ಬಸವಣ್ಣನವರ ವಚನವನ್ನು ಸಾವಿರಾರು  ಮಕ್ಕಳಿಂದ ನಿತ್ಯ  ಬೆಳಿಗ್ಗೆ ಮತ್ತು ಸಂಜೆ ಧ್ವನಿ ವರ್ಧಕದಲ್ಲಿ ಮುಗಿಲು ಮುಟ್ಟುವಂತೆ ಘಂಟಾಘೋಷ ಮಾಡಿಸುವ ಮಠದ ಶ್ರೀಗಳು  ಕಾಂಕ್ರಿಟ್ ಸ್ಥಾವರ ಸ್ಥಾಪನೆಗೆ ಒಪ್ಪಿಗೆ ಸೂಚಿಸುವುದು ದ್ವಂದ್ವವಲ್ಲವೆ?

ಸ್ವಾಮೀಜಿಯವರು ಪರಿಹಾರ ಸೂಚಿಸಲೇಬೇಕಾದ ಘನ ಗಂಭೀರ ಸಮಸ್ಯೆಗಳು ಸಾಕಷ್ಟಿವೆ, ಅದಕ್ಕಾಗಿ ಸಾವಿರಾರು ಭಕ್ತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.