ವಾರ್ಡ್ ನಂ. 131ರ ನಾಯಂಡನಹಳ್ಳಿ ನಂತರದ ವಿನಾಯಕ ಲೇಔಟ್ನ ಬಸ್ಸು ನಿಲ್ದಾಣದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈಗ ಆ ಜಾಗ ಆಟದ ಮೈದಾನವಾಗಿ ಪರಿವರ್ತನೆಗೊಂಡಿದೆ. ಸಂಜೆ ವೇಳೆಗೆ ಚಾಟ್ ಅಂಗಡಿಯವರು ಅಲ್ಲಿ ವ್ಯಾಪಾರ ಆರಂಭಿಸುತ್ತಾರೆ. ಚಂದ್ರಾ ಲೇಔಟ್ನಿಂದ ಕೆಂಪೇಗೌಡ ಬಸ್ಸು ನಿಲ್ದಾಣದವರೆಗೆ ತೆರಳುವ ಬಸ್ಸು ಈ ನಿಲ್ದಾಣಕ್ಕೆ ಬರುತ್ತಿಲ್ಲ. ದಯವಿಟ್ಟು ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.