ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ನಗರ ಸಂಚಾರ ಬಸ್ನಲ್ಲಿ (ಸಿಟಿ ಬಸ್) ಪ್ರಯಾಣದ ಚಾರ್ಜು ₨ 14 (15 ಕಿ.ಮೀ). ಆದರೆ, ರಾಜ್ಯ ರಸ್ತೆ ಸಾರಿಗೆ ಬಸ್ನಲ್ಲಿ (ಕೆಎಸ್ಆರ್ಟಿಸಿ) ₨22, ಕ್ರಮಿಸುವ ದೂರ 16 ಕಿ.ಮೀ.ಈ ಎರಡೂ ಬಸ್ಗಳು ಕ್ರಮಿಸುವುದು ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಾದರೂ ಕೆಎಸ್ಆರ್ಟಿಸಿ ಬಸ್ಗೆ ಮಾತ್ರ ಒಂದು ಕಿ.ಮೀ. ದೂರ ಹೆಚ್ಚು ಮತ್ತು ದರವೂ ಅಧಿಕ. ಅದು ಹೇಗೆ?
ಹಾಗೆ ನೋಡಿದರೆ, ಗ್ರಾಮಾಂತರ (ಸಬರ್ಬ್) ಬಸ್ನಿಲ್ದಾಣದಿಂದ ಹಿಂದಕ್ಕೆ ಸುಮಾರು ಒಂದು ಕಿ.ಮೀ. ಅಂತರದಲ್ಲಿ ನಗರ ಬಸ್ನಿಲ್ದಾಣ (ಅರಮನೆ ಪಕ್ಕ) ಇದೆ. ಇಲ್ಲಿಂದ ಶ್ರೀರಂಗಪಟ್ಟಣಕ್ಕೆ 16 ಕಿ.ಮೀ. ಆದೀತು. ಆದರೆ, ಈ ಬಸ್ನ ಪ್ರಯಾಣ ದರ ಕೆಎಸ್ಆರ್ಟಿಸಿಗಿಂತ ₨ 8 ಕಡಿಮೆ. ಇದು ಕೆಎಸ್ಆರ್ಟಿಸಿಯ ಹಗಲು ದರೋಡೆಯಲ್ಲದೆ ಮತ್ತೇನು?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.