ಕೆ.ಪಿ.ಎಸ್.ಸಿ.ಯಲ್ಲಿ ಅವ್ಯವಹಾರಗಳನ್ನು ಸಿ.ಐ.ಡಿ. ತನಿಖೆಗೆ ಸರ್ಕಾರ ಒಪ್ಪಿಸಿರುವುದು ಅಭಿನಂದನಾರ್ಹ. ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ನ್ಯಾಯ ದೊರಕಬಹುದೆಂಬುದು ನಂಬಿಕೆ. ಆದರೆ ತನಿಖೆಯು ವರ್ಷಾನುಗಟ್ಟಲೆ ನಡೆಯುವುದರಿಂದ ಉದ್ಯೋಗ ಆಕಾಂಕ್ಷಿಗಳ ವಯೋಮಿತಿ ಮೀರುತ್ತದೆ. ಅವರಿಗೆ ಉದ್ಯೋಗ ಅವಶ್ಯಕತೆ ಬಹಳ ಇರುತ್ತದೆ. ಸರ್ಕಾರವು ಆದಷ್ಟು ಬೇಗ ದಕ್ಷ, ಪ್ರಾಮಾಣಿಕರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಉದ್ಯೋಗ ಆಕಾಂಕ್ಷಿಗಳ ಬಾಳಿನಲ್ಲಿ ಆಶಾಕಿರಣ ಮೂಡಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.