‘ಐಪಿಎಲ್ನಲ್ಲಿ ನಾವೆಂದೂ ಗೆಲ್ಲಲಾರೆವು’! ಇದು 10 ವರ್ಷಗಳಿಂದ ಆರ್.ಸಿ.ಬಿ. ತಂಡದ ಘೋಷವಾಕ್ಯ. ವಿಶ್ವದ ಶ್ರೇಷ್ಠ ಆಟಗಾರ ಇದರ ನಾಯಕನಾಗಿರುವುದು ವಿಪರ್ಯಾಸ.
ಆರ್.ಸಿ.ಬಿ. ಆಡಳಿತ ಮಂಡಳಿಯು ಉತ್ತಮ ಆಟಗಾರರನ್ನೆಲ್ಲಾ ಕೈಬಿಟ್ಟು, ಗುಜರಿಯಿಂದ ಆಯ್ದು ತಂದು ರಿಪೇರಿ ಮಾಡಿ ಉಪಯೋಗಿಸುವಂತೆ ಆಟಗಾರರನ್ನು ಹರಾಜಿನಲ್ಲಿ ಕೊಂಡು (ಚೌಕಾಸಿ ವ್ಯಾಪಾರ ಮಾಡಿ) ಜಮೆ ಮಾಡಿದೆ.
ಕರ್ನಾಟಕದ ಉತ್ತಮ ಆಟಗಾರರನ್ನೆಲ್ಲಾ ಕೈಬಿಟ್ಟು ಹಡಾಸ್ ಆಟಗಾರರನ್ನು ಕಟ್ಟಿಕೊಂಡು ಇನ್ನೂ 10 ವರ್ಷವಾದರೂ ಈ ತಂಡ ಗೆಲ್ಲಲಾರದು. ಕಡೇಪಕ್ಷ ನಮ್ಮ ರಣಜಿ ತಂಡವನ್ನೂ ಇವರು ಸೋಲಿಸಲಾರರು.
-ಬಿ.ಎಸ್. ಅಶ್ವತ್ಥನಾರಾಯಣ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.