ADVERTISEMENT

ಘೋರ ಸಮಸ್ಯೆಯೇ?

ಅನ್ನಪೂರ್ಣ ವೆಂಕಟನಂಜಪ್ಪ
Published 5 ನವೆಂಬರ್ 2015, 19:30 IST
Last Updated 5 ನವೆಂಬರ್ 2015, 19:30 IST

ಇತ್ತೀಚೆಗೆ ಸಮಾಜದಲ್ಲಿ ಅಸಹಿಷ್ಣುತೆ ಪರಮಾವಧಿ ತಲುಪಿದ್ದು ಮನುಷ್ಯ–ಮನುಷ್ಯರಲ್ಲಿ ಅಪನಂಬಿಕೆ ಹಾಗೂ ದ್ವೇಷ ಸೃಷ್ಟಿಯಾಗುತ್ತಿದೆ. ಗೋಮಾಂಸ ಸೇವನೆಯ ಬಗ್ಗೆ ಅತೀವ ಚರ್ಚೆಯಾಗುತ್ತಿದ್ದು ಮಾಧ್ಯಮಗಳಲ್ಲಿ ಇದೊಂದು ಘೋರ ಸಾಮಾಜಿಕ ಸಮಸ್ಯೆ ಎಂಬಂತೆ ಬಿಂಬಿತವಾಗುತ್ತಿದೆ.

ಯಾರು ಏನಾದರೂ ತಿನ್ನಲಿ. ತಿಂದವರು ಅರಗಿಸಿಕೊಳ್ಳುತ್ತಾರೆ. ಇಷ್ಟವಿಲ್ಲದವರು ತಿನ್ನುವುದು ಬೇಡ. ತಿನ್ನುವ ಆಹಾರದ ಬಗ್ಗೆ ಈ ಮಟ್ಟದ ವಾದ–ವಿವಾದ ಅಗತ್ಯವೇ? ಇನ್ನಾದರೂ ಈ ಬಗ್ಗೆ ಚರ್ಚೆ ನಿಲ್ಲಿಸಿ, ಜನರ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳತ್ತ ಮುಖಂಡರು ಹಾಗೂ ಜನರು ಗಮನಹರಿಸಲಿ. ಮಾಧ್ಯಮಗಳಲ್ಲಿ  ವಿಚಾರ ಪ್ರಚೋದಕ ಹಿತಕರ ಚರ್ಚೆಗಳಿಗೆ ಒತ್ತು ದೊರೆಯಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.