ADVERTISEMENT

ಜನಸ್ನೇಹಿ ಪೊಲೀಸರಿಗೆ ಶ್ಲಾಘನೆ

ರವಿಕುಮಾರ್
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ಜೆ.ಜೆ. ನಗರದಲ್ಲಿ ನವೆಂಬರ್‌ 23ರಂದು ಜನಸಂಪರ್ಕ ಸಭೆಯಲ್ಲಿ ಸುಮಾರು 200ರಿಂದ 300 ಸಾರ್ವಜನಿಕರು ಪಾಲ್ಗೊಂಡು, ಅದರ ಪ್ರಯೋಜನ ಪಡೆದುಕೊಂಡರು. ಡಿಸಿಪಿ ರಾಜಪ್ಪನವರು ಅಪರಾಧ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಿ, ತಿಳಿವಳಿಕೆಯ ಮಾತುಗಳನ್ನು ಹೇಳಿದ್ದರು. ಇದರ ಸ್ಪಂದನ ನಿಜಕ್ಕೂ ಶ್ಲಾಘನೀಯ ಹಾಗೂ ಪ್ರಶಂಸನೀಯ.

ಇದೇ ರೀತಿ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ತಿಂಗಳಿಗೊಮ್ಮೆ ಇನ್‌್ಸಪೆಕ್ಟರ್‌ ಜನಸಂಪರ್ಕ ಸಭೆ ನಡೆಸಲಿ. ಎರಡು ಅಥವಾ ಮೂರು ತಿಂಗಳಿಗೊಮ್ಮೆ ಎಸಿಪಿ, ಡಿಸಿಪಿ ಜನಸಂಪರ್ಕ ಸಭೆಯನ್ನು ಕರೆದು, ನಡೆಯುವ ದಿನಾಂಕವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಿ. ಅಪರಾಧಗಳನ್ನು ತಡೆಗಟ್ಟಲು ಪೊಲೀಸರು ಜನಸ್ನೇಹಿಗಳಾಗಲಿ.
–ರವಿಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT