ADVERTISEMENT

ಜಾತಿ ಜಪಕ್ಕೆ ಕೊನೆಯಿಲ್ಲವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಹೊಸ ಮನೆಗೆ ಬಾಡಿಗೆಗೆಂದು ಹೋದಾಗ ಪಕ್ಕದ ಮನೆಯ ಆಂಟಿ ಮಾತನಾಡಿಸುತ್ತಲೇ ‘ನೀವು ಗೌಡ್ರು ತಾನೇ’ ಎಂದು ಕೇಳಿದ್ದರು. ತಕ್ಷಣ ಅವಾಕ್ಕಾದ ನಾನು ‘ಹ್ಞೂಂ ಆಂಟಿ’ ಎಂದೆ. ಮರು­ಕ್ಷಣ ನನ್ನಗನ್ನಿಸಿದ್ದು ನಾನು ಪರಿಶಿಷ್ಟ ಜಾತಿಯವ­ಳೆಂಬುದಾಗಿ ಹೇಳಿಕೊಳ್ಳಲು ಸಾಧ್ಯವಿ­ರ­ಲಿಲ್ಲವೇ ಎಂದು!

ಇದಾದ ಆರು ತಿಂಗಳ ನಂತರ ಅದೇ ಆಂಟಿ ಯಾರದೋ ವಿಷಯವಾಗಿ ಅವರ ಮನೆ ಮಾಲೀಕರ ಬಳಿಯಲ್ಲಿ, ‘ಏನು ಮಾಡು­ವುದು ಹೇಳದೇ ಕೇಳದೇ ಒಳಗೆ ಬಂದುಬಿಟ್ಟರು, ಅವರು ಹೋದಮೇಲೆ ಮನೆ ಒರೆಸಿದರಾಯಿತು’ ಎಂದು ಮಾತನಾಡಿಕೊಳ್ಳು­ತ್ತಿದ್ದರು. ಇದನ್ನು ಕೇಳಿ ನಾನು ವಿದ್ಯಾವಂತಳಾದರೂ ಒಳಗೊಳಗೇ ಆತಂಕಿತ­ಳಾ­ಗಿದ್ದೆ.

ಈ ವ್ಯವಸ್ಥೆಯನ್ನು ಅಂಬೇಡ್ಕರ್‌–ಗಾಂಧಿ­ ಬಂದು ಹೋದರೂ ಬದಲಿ­ಸ­ಲಾಗ­ಲಿಲ್ಲವಲ್ಲ? ನಾವು ಧೈರ್ಯವಾಗಿ ಜಾತಿ­ಯನ್ನು ಹೇಳಿ­­ಕೊಳ್ಳಲು ಸಾಧ್ಯವೇ ಇಲ್ಲವೇ? ಮನುಷ್ಯನಿಗೆ ಜಾತಿ ಅವಶ್ಯವೇ? ‘ನೀವು ಯಾರು?’ ‘ಗೌಡ್ರಾ’? ಎಂದು ಅವರು ಏಕೆ ಕೇಳುತ್ತಾರೆ? ಎಲ್ಲರೂ ಗೌಡರೇ ಆಗಿರಬೇಕೆ??

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.