ಹೊಸ ಮನೆಗೆ ಬಾಡಿಗೆಗೆಂದು ಹೋದಾಗ ಪಕ್ಕದ ಮನೆಯ ಆಂಟಿ ಮಾತನಾಡಿಸುತ್ತಲೇ ‘ನೀವು ಗೌಡ್ರು ತಾನೇ’ ಎಂದು ಕೇಳಿದ್ದರು. ತಕ್ಷಣ ಅವಾಕ್ಕಾದ ನಾನು ‘ಹ್ಞೂಂ ಆಂಟಿ’ ಎಂದೆ. ಮರುಕ್ಷಣ ನನ್ನಗನ್ನಿಸಿದ್ದು ನಾನು ಪರಿಶಿಷ್ಟ ಜಾತಿಯವಳೆಂಬುದಾಗಿ ಹೇಳಿಕೊಳ್ಳಲು ಸಾಧ್ಯವಿರಲಿಲ್ಲವೇ ಎಂದು!
ಇದಾದ ಆರು ತಿಂಗಳ ನಂತರ ಅದೇ ಆಂಟಿ ಯಾರದೋ ವಿಷಯವಾಗಿ ಅವರ ಮನೆ ಮಾಲೀಕರ ಬಳಿಯಲ್ಲಿ, ‘ಏನು ಮಾಡುವುದು ಹೇಳದೇ ಕೇಳದೇ ಒಳಗೆ ಬಂದುಬಿಟ್ಟರು, ಅವರು ಹೋದಮೇಲೆ ಮನೆ ಒರೆಸಿದರಾಯಿತು’ ಎಂದು ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಕೇಳಿ ನಾನು ವಿದ್ಯಾವಂತಳಾದರೂ ಒಳಗೊಳಗೇ ಆತಂಕಿತಳಾಗಿದ್ದೆ.
ಈ ವ್ಯವಸ್ಥೆಯನ್ನು ಅಂಬೇಡ್ಕರ್–ಗಾಂಧಿ ಬಂದು ಹೋದರೂ ಬದಲಿಸಲಾಗಲಿಲ್ಲವಲ್ಲ? ನಾವು ಧೈರ್ಯವಾಗಿ ಜಾತಿಯನ್ನು ಹೇಳಿಕೊಳ್ಳಲು ಸಾಧ್ಯವೇ ಇಲ್ಲವೇ? ಮನುಷ್ಯನಿಗೆ ಜಾತಿ ಅವಶ್ಯವೇ? ‘ನೀವು ಯಾರು?’ ‘ಗೌಡ್ರಾ’? ಎಂದು ಅವರು ಏಕೆ ಕೇಳುತ್ತಾರೆ? ಎಲ್ಲರೂ ಗೌಡರೇ ಆಗಿರಬೇಕೆ??
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.