ಬಂತು ಬಂಧನ ಇದೇ ನಂದನ
ದೇವ ದೇವಗೆ ವಂದನ
ಜೇಲು ಜೈಜೈ ಕೋರ್ಟು ಸೈಸೈ
ಸಕಲ ಸುಂದರ ಸಾಧನ
ದುಡ್ಡಿನಿಂದ ದುಡ್ಡು ಢಂಢಂ
ಕಟ್ಟು ಕಟ್ಟಳೆ ಢುಂಢುಂ
ದುಡ್ಡು ತೂರಿ ಮಡ್ಡು ಬಿಡಿಸು
ರಾಜಕಾರಣ ರಿಂಝಿಂ
ನೋಟಿನಿಂದ ನೋಟು ಬೆಳೆಸು
ಬೇಡ ಜೋಳ ರಾಗಿಯು
ಚಿನ್ನದಿಂದ ಚಿನ್ನ ಚನ್ನ
ಬೇಡ ಕಡ್ಲಿ ಸಜ್ಜಿಯು
ಪ್ರಜಾರಾಜ್ಯಾ ರಜಾರಾಜ್ಯಾ
ವಜಾಮಾಡು ಜಾಣರ
ನೋಟು ಕೊಟ್ಟು
ವೋಟು ಪಡೆವರ
ನೋಡು ರಾವಣ
ಕೋಣರ !!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.