ADVERTISEMENT

ಜೈಲ್ ಭರೋ...

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ಅಡಿಕೆ ಕದ್ದರೂ ಕಳ್ಳ!
ಆನೆ ಕದ್ದರೂ ಕಳ್ಳ!!
ಈಗ ಹಾಗಿಲ್ಲ!!!
ಕಾಲ ಬದಲಾಗಿದೆ....
ಗಣಿ ಉಳ್ಳವರೂ
ಗಣಿ ಕಬಳಿಸಿದವರೂ
ಗಣಿ ಕಪ್ಪ ಸ್ವೀಕರಿಸಿದವರೂ
ಅಗಣಿತ ಸಂಪತ್ತು ಗಳಿಸಿದವರೂ
ಕಳ್ಳರಲ್ಲಂತೆ! ಸುಳ್ಳರಲ್ಲಂತೆ!!
ಮತ್ತೇನೇನು? ಸ್ವಾಭಿಮಾನಿ
 `ಜೈಲ್ ಭರೋ~ ಚಳುವಳಿ
ಹೋರಾಟಗಾರರಂತೆ
ಭುವನೇಶ್ವರಿ ತಾಯಿ ಕಾಪಾಡು
ಚಿನ್ನದ ಖಡ್ಗ ಅರ್ಪಿಸುವ
ಹರಕೆ ಹೊತ್ತು ಕಂಬಿ ಎಣಿಸುತ್ತಿದ್ದಾರೆ!
ಶ್ರೀಸಾಮಾನ್ಯ ಪ್ರಜೆಯ ಶಾಪವಂತೆ!!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.