ಎಂಜಲೆಲೆಗಳ ಮೇಲೆ ಉರುಳು ಸೇವೆ
ನಾಚಿಕೆಯಲಿ ನಾಗರಿಕರ ತಲೆ ತಗ್ಗಿಸಿವೆ
ಆದರೇನಂತೆ ಡಾಕ್ಟರು ಇಂಜಿನಿಯರು
ಕೊಡುವರಿದಕೆ ಮನಶ್ಶಾಂತಿಯ ಹೆಸರು
ಇದ್ದರೇನಂತೆ ಎದುರಿಗೇ ಪೊಲೀಸರು
ಎಲ್ಲರೂ ಮೂಢ ನಂಬಿಕೆಗಳ ದಾಸರು
ಮನುಜ ಚಂದ್ರನ ಮೇಲೆ ಇಳಿದರೇನಂತೆ
ನಡೆಯುತಲೇ ಇದೆ ಅನಾಗರಿಕತೆಯ ಸಂತೆ
ಮೈಗೆ ಮೆತ್ತಿಕೊಂಡರೆ ಊಟದ ಮುಸುರೆ
ತೊಳೆಯುವುದೇ ಮನದೊಳಗಿನ ಕೆಸರು
ಓ ದೇವರೇ ! ನೀನೇ ತೊಲಗಿಸು ಅಜ್ಞಾನ
ಮುಂದಿನ ಪೀಳಿಗೆಗೆ ಕರುಣಿಸು ಸುಜ್ಞಾನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.