ADVERTISEMENT

ಧರ್ಮದೇಟು ಎಂಬ ಹಿಂಸೆ ನಿಲ್ಲಲಿ

ಅನ್ನಪೂರ್ಣ ವೆಂಕಟನಂಜಪ್ಪ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST

ಕೆಲವು ಸಂಘಟಿತ ಶಕ್ತಿಗಳು ಇತ್ತೀಚೆಗೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಅಟ್ಟಹಾಸ ಮೆರೆಯುತ್ತಿರುವುದು ನಾಗರಿಕ ಸಮಾಜಕ್ಕೊಂದು ಕಪ್ಪು ಚುಕ್ಕೆಯಾಗಿದೆ.
ಬೆಂಗಳೂರಿನ ಹುಣಸಮಾರನ ಹಳ್ಳಿಯಲ್ಲಿ ವಂಚಕ ದಂಪತಿಗಳಿಗೆ ಮಹಿಳೆ - ಪುರುಷ ಎಂಬ ಭೇದವಿಲ್ಲದೆ ಹಿಗ್ಗಾಮುಗ್ಗ ಹೊಡೆದಿರುವುದು ಆತಂಕದ ವಿಷಯ.

ಈ ಹಿಂಸಾಚಾರ ಅಕ್ಷಮ್ಯ. ಹೀಗೆ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಇವರೇ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಮೂಲಕ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನೇ ಲಘುವಾಗಿ ಕಂಡಂತಾಗಿದೆ.  ಜನತಂತ್ರ ವ್ಯವಸ್ಥೆಯಲ್ಲಿ ಇದು ಸಲ್ಲದು.
ಇಂತಹ ಕುಕೃತ್ಯವನ್ನು `ಧರ್ಮದೇಟು~ ಎಂಬುದಾಗಿ ಕರೆದು ವಿಪರೀತ ಪ್ರಚಾರ ನೀಡುವ ಬಗೆಗೆ ಮಾಧ್ಯಮಗಳೂ ಜಾಗರೂಕವಾಗಿರುವುದು ಅವಶ್ಯ.

ಕಾನೂನು ಎಲ್ಲರ ಹಿತಕ್ಕಾಗಿ ಇದೆ. ಅದನ್ನು ಬಳಸಿಕೊಳ್ಳುವ ಮತ್ತು ಕಾಪಾಡುವ ವ್ಯವಸ್ಥೆ ನಮ್ಮದಾಗಬೇಕೇ ಹೊರತು ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.