‘ಗಾಂಧೀಜಿ ತಮ್ಮ ಪ್ರಾಣ ಒತ್ತೆ ಇಟ್ಟು ದಲಿತರ ಪ್ರತ್ಯೇಕ ಮತದಾನದ ಹಕ್ಕು ಕಸಿದುಕೊಂಡರು’ ಎಂಬುದಾಗಿ ಕವಿ ಸಿದ್ದಲಿಂಗಯ್ಯ ಅವರು ತುಮಕೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ಅಂಬೇಡ್ಕರ್– ಜಗಜೀವನರಾಂ ಜಯಂತಿಯಲ್ಲಿ ಹೇಳಿದ್ದಾರೆ (ಪ್ರ.ವಾ., ಮೇ 25).
‘ಈ ಕಾನೂನು ಮಾಡಿ ದಲಿತರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವುದು ಬೇಡ’ ಎಂಬ ವಿಶಾಲಾರ್ಥದಲ್ಲಿ ಮಹಾತ್ಮ ಗಾಂಧಿ ಈ ರೀತಿ ಮಾಡಿದರು. ಆದರೆ ಅಂಬೇಡ್ಕರ್ ಅವರ ಸ್ವಾಭಿಮಾನದ ಬಗ್ಗೆ ಮಾತನಾಡುವ ನಮ್ಮ ಕವಿ ಏನು ಮಾಡಿದ್ದಾರೆ? ರಾಮಕೃಷ್ಣ ಹೆಗಡೆ ನೀಡಿದ ಎಂಎಲ್ಸಿ ಪಟ್ಟಕ್ಕಾಗಿ ಪ್ರೊ. ಬಿ. ಕೃಷ್ಣಪ್ಪ ಜೀವ ತೇದು ಕಟ್ಟಿದ್ದ ಡಿಎಸ್ಎಸ್ನ ಸಮಾಧಿ ಮಾಡಿದರು! ಇವರಿಗೂ ಮೊದಲೆ ಪ್ರೊ. ಕೃಷ್ಣಪ್ಪನವರು ಕ್ರಾಂತಿಕವಿತೆಗಳನ್ನು (‘ನೆನಪುಗಳೆ ನಿಲ್ಲಿ ನಿಲ್ಲಿ’) ಬರೆದಿದ್ದರೂ, ಪ್ರಕಟಿಸದೇ ಇದ್ದ ಕಾರಣ ಇವರು ಪ್ರಥಮ ದಲಿತಕವಿ ಎಂದೂ ಹೆಸರಾದರು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.