ADVERTISEMENT

ನೀರಿಗೆ ಹಾಹಾಕಾರ

ರಾಘವೇಂದ್ರರಾವ್ ವಿದ್ಯಮಾನ್ಯನಗರ/
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ನೀರಿಗೆ ಹಾಹಾಕಾರ
ವಿದ್ಯಮಾನ್ಯ ನಗರ ಅಂದ್ರಹಳ್ಳಿಯ ಎರಡನೇ ಹಂತದಲ್ಲಿದೆ. ಇಲ್ಲಿ ಕುಡಿಯುವ ನೀರಿಗೆ ತುಂಬಾ ಅಭಾವವಿದ್ದು ಜೀವನ ಸಾಗಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿರುವಾಗ ನೀರು ಕೊಂಡು ಜೀವಿಸುವುದು ಅಷ್ಟೇ ಕಷ್ಟವಾಗಿದೆ. ಸಂಬಂಧಪಟ್ಟವರು ಮಾನವೀಯತೆ ದೃಷ್ಟಿಯಿಂದಲಾದರೂ ಇಲ್ಲಿನ ನಿವಾಸಿಗಳಿಗೆ ವಾರಕ್ಕೆ ಎರಡಾವರ್ತಿಯಾದರೂ ನೀರಿನ ಸರಬರಾಜು ಮಾಡುವ ಮೂಲಕ ಬಡ ಕುಟುಂಬಗಳು ಇನ್ನಷ್ಟು ದಿನ ಬದುಕುವಂತಾಗಲಿ.
- ರಾಘವೇಂದ್ರರಾವ್ ವಿದ್ಯಮಾನ್ಯನಗರ

ಕುಡಿಯಲು ನೀರಿಲ್ಲ

ವಿಧಾನಸೌಧ ಪಕ್ಕದಲ್ಲಿನ ಬಹು ಅಂತಸ್ತು ಕಟ್ಟಡದ ಹಲವು ಅಂತಸ್ತುಗಳಲ್ಲಿ ಸಚಿವಾಲಯದ ಹಾಗೂ ಇತರೆ ಇಲಾಖೆಗಳು ಕಾರ‌್ಯನಿರ್ವಹಿಸುತ್ತವೆ. ಆದರೆ ಇಲ್ಲಿ ಬರುವ ಸಾರ್ವಜನಿಕರಿಗೆ, ದಾಹ ತಣಿಸಲು ಕುಡಿಯುವ ನೀರಿನ ಸೌಲಭ್ಯ ಇರುವುದಿಲ್ಲ. ದಯವಿಟ್ಟು ಸಂಬಂಧಪಟ್ಟವರು ಗಮನಿಸಿ.
-ರಾಂನಗರ ದೇವ್ರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.