ಕೇಂದ್ರ ಸರ್ಕಾರವು ಪೆಟ್ರೋಲ್, ಡಿಸೇಲ್, ಬಸ್ ದರದ ಜೊತೆಗೆ ಅಡುಗೆಯ ಅನಿಲದ ಬೆಲೆಯನ್ನು 11.42 ರೂಪಾಯಿ ಹೆಚ್ಚಿಸಿದೆ. ಅದರೊಂದಿಗೆ ವರ್ಷಕ್ಕೆ ಆರು ಮಾತ್ರ ಬಳಕೆ ಮಾಡಬೇಕು ಎಂದು ನಿರ್ದಿಷ್ಟವಾಗಿ ಹೇಳಿದೆ. ಮಧ್ಯಮ ವರ್ಗದವರು ಮಾತ್ರ ಇದನ್ನು ಪಾಲಿಸಬೇಕು. ಆದರೆ, ಗಣ್ಯ ವ್ಯಕ್ತಿಗಳು, ರಾಜಕೀಯ ವ್ಯಕ್ರಿಗಳು, ಶ್ರಿಮಂತರು ಕಾಳಸಂತೆಯಲ್ಲಿ ಹೆಚ್ಚಾಗಿ ಪಡೆದು ಬಳಕೆ ಮಾಡುತ್ತಾರೆ. ಇದು ಅನ್ಯಾಯ. ಎಲ್ಲರಿಗೂ ಒಂದೇ ನ್ಯಾಯ ಒದಗುವಂತೆ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು
- ಚಂದ್ರಶೇಖರ್ ಮುಕ್ಕುಂದಿ , ಗಂಗಾವತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.