ADVERTISEMENT

ಪಾಪರೆಡ್ಡಿಪಾಳ್ಯದ ಸಮಸ್ಯೆ ಬಗೆಹರಿಸಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿನಗರ ವಾರ್ಡ್ ನಂ. 129 ಪಾಪರೆಡ್ಡಿಪಾಳ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇದು.

ಇಲ್ಲಿಯ ವಾಸಿಗಳು ಈಗಾಗಲೆ ಬೆಂಗಳೂರು ಜಲಮಂಡಳಿಗೆ  7-8 ಸಾವಿರಕ್ಕೂ ಹೆಚ್ಚು  ರೂಪಾಯಿಗಳಷ್ಟು ಹಣವನ್ನು ಪಾವತಿಸಿ 5-6 ವರ್ಷಗಳಾಗಿವೆ. ಇಂದಿನವರಿಗೆ ಕಾವೇರಿ ನೀರು  ಬಂದಿಲ್ಲ. 

ಸಂಬಂಧಿಸಿದವರು ಈ ಬಗ್ಗೆ ಕಾಳಜಿ ವಹಿಸಲೆಂದು ಮನವಿ ಮಾಡಿಕೊಳ್ಳುತ್ತೇನೆ.
ಬಸ್ ಸ್ಟಾಪ್‌ನಿಂದ ಇಲ್ಲಿನ ಪಾಪರೆಡ್ಡಿಪಾಳ್ಯದ ಪ್ರಸಿದ್ಧ ಭವಾನಿಶಂಕರ ದೇವಸ್ಥಾನದ ರಸ್ತೆಬದಿ ಎರಡೂ ಕಡೆ ವಾಹನ ನಿಲ್ಲಿಸುತ್ತಾರೆ. 

ರಸ್ತೆಯಲ್ಲಿ ದೊಡ್ಡ ದೊಡ್ಡ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಕೇಳುತ್ತೇವೆ. ಈ ವೃತ್ತದಲ್ಲಿ ಟ್ರಾಫಿಕ್ ಪೊಲೀಸರನ್ನು ಹಾಕಿರಿ. ನೆಮ್ಮದಿಯಿಂದ ನೆಲೆಸಲು ಅವಕಾಶ ಮಾಡುವಿರೆಂದು ತಮ್ಮಲ್ಲಿ ವಿನಂತಿ. 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.