ADVERTISEMENT

ಪುಸ್ತಕಗಳ ಕೊರತೆ ನೀಗಿಸುವರೇ?

ರಾಜಕುಮಾರ ಎಂ.ದಣ್ಣೂರ, ಗುಲ್ಬರ್ಗಾ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ಗುಲ್ಬರ್ಗ ವಿಶ್ವವಿದ್ಯಾಲಯ ಹೇಗಿದೆ ಎಂದರೆ ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎನ್ನುವ ರೀತಿ­ಯಲ್ಲಿ ಇದೆ. ವಿ.ವಿ. ಗ್ರಂಥಾ­ಲಯ­ದಲ್ಲಿ ಪುಸ್ತಕ­ಗಳ ಕೊರತೆ ವಿದ್ಯಾರ್ಥಿಗಳಿಗೆ ದೊಡ್ಡ ತಲೆ­ನೋವಾ­ಗಿದೆ.

ಗ್ರಂಥಾಲಯದಲ್ಲಿ ಕನ್ನಡದ ಹಿರಿಯ ಕವಿ–ಸಾಹಿತಿಗಳ, ಜ್ಞಾನಪೀಠ ಪ್ರಶಸ್ತಿ ಪಡೆದವರ ಒಂದು ಪುಸ್ತಕವೂ ಸಿಗುವುದಿಲ್ಲ. ವಿದ್ಯಾರ್ಥಿಗಳು, ಮುಖ್ಯ ಗ್ರಂಥಪಾಲಕರ ಬಳಿ ಹೋಗಿ ಪುಸ್ತಕಗಳ ಬಗ್ಗೆ ವಿಚಾರಿಸಿದರೆ, ಗ್ರಂಥಪಾಲಕರು ಆ ವಿದ್ಯಾರ್ಥಿ­ಗಳ ಹೆಸರು, ವಿಭಾಗ ಕೇಳಿ ಆಯಾ ವಿಭಾಗದ ಮುಖ್ಯಸ್ಥರಿಗೆ ‘ನಿಮ್ಮ ವಿದ್ಯಾರ್ಥಿಗಳು ಬಂದು ಅಸಭ್ಯವಾಗಿ ನಮ್ಮ ಜೊತೆ ವರ್ತಿಸಿದರು’ ಎಂದು ಇಲ್ಲಸಲ್ಲದ ಆರೋಪ ಹೊರಿಸುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.