ADVERTISEMENT

ಪೇಜಾವರರಿಗೆ ಶ್ರೇಷ್ಠತೆಯ ವ್ಯಸನ

ಅನಂತ ನಾಯಕ ಎನ್.
Published 27 ನವೆಂಬರ್ 2014, 19:30 IST
Last Updated 27 ನವೆಂಬರ್ 2014, 19:30 IST

ಮೂಢನಂಬಿಕೆ ನಿಷೇಧ ಮಸೂದೆ ಜಾರಿಗಾಗಿ ಬೆಂಗಳೂರಿನಲ್ಲಿ ನಡೆಸಿದ ನಿರಶನದಲ್ಲಿ ರಾಜ್ಯದ ವಿವಿಧ ಜಾತಿ, ವರ್ಗಗಳ ಮಠಾಧೀಶರು
ಪಾಲ್ಗೊಂ­ಡಿ­ದ್ದರು. ಇವರೆಲ್ಲಾ ಬಸವ, ಬುದ್ಧ, ಅಂಬೇಡ್ಕರ್ ಅವರ ಸಮ ಸಮಾಜದ ನಿರ್ಮಾಣ­ದಲ್ಲಿ ನಂಬಿಕೆ ಉಳ್ಳ­ವರು. ಅಂಥವರನ್ನು ‘ಕಾವಿ ವೇಷಧಾರಿಗಳು’ ಎಂದು ಕರೆದಿರುವ ಪೇಜಾವರ ಶ್ರೀಗಳ ಮನಸ್ಸಿನಲ್ಲಿ ಬ್ರಾಹ್ಮಣ್ಯವೇ ಶ್ರೇಷ್ಠ ಎಂಬ ಶ್ರೇಷ್ಠತೆಯ ವ್ಯಸನ ಇದ್ದಂತಿದೆ.

ನಿಡುಮಾಮಿಡಿ ಶ್ರೀಗಳಿಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ಪೇಜಾವರ ಶ್ರೀಗಳು ಹೇಳಿ­ದ್ದಾರೆ. ಹೌದು, ಅವರಿಗೆ ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳಲ್ಲಿ ನಂಬಿಕೆ ಇಲ್ಲ. ಬದಲು ಮಾನವ ಧರ್ಮ­ದಲ್ಲಿ ನಂಬಿಕೆ ಇದೆ. ಹಾಗಾಗಿ, ಅವರು ಪ್ರಗತಿ­ಪರ ಮಠಾಧೀಶರ ವೇದಿಕೆಯ ನೇತೃತ್ವ ವಹಿಸಿ ಮೂಢನಂಬಿಕೆ ನಿಷೇಧ ಮಸೂದೆಗೆ ಆಗ್ರಹಿಸಿ ನಿರ­ಶನ ನಡೆಸಿದ್ದಾರೆ.

ಆದರೆ, ಪೇಜಾವರ ಶ್ರೀಗಳಿಗೆ ಇಂಥ ಮಸೂದೆ ಬೇಕಾಗಿಲ್ಲ. ಬದಲಿಗೆ ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳಲ್ಲೇ ನಂಬಿಕೆ ಇರು­ವಂತಿದೆ.  
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.