ADVERTISEMENT

ಪ್ರಶ್ನಿಸುವ ಹಕ್ಕು ಇದೆಯೇ?

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST

ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿಗರ ಶೇಕಡಾವಾರು ಮತದಾನ ಪ್ರಮಾಣ ರಾಜ್ಯದಲ್ಲೇ ಕನಿಷ್ಠವಾಗಿತ್ತು ಎಂಬುದನ್ನು ತಿಳಿದು ಬೇಸರ, ನಿರಾಸೆಯಾಯಿತು.

ವಾಹನ ದಟ್ಟಣೆ, ಕಸ ವಿಲೇವಾರಿ, ಕೆರೆಗಳ ಮಾಲಿನ್ಯ ಇತ್ಯಾದಿ ಸಮಸ್ಯೆಗಳ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಉದ್ದುದ್ದ ಲೇಖನ ಬರೆಯುತ್ತ, ಆಡಳಿತ ವ್ಯವಸ್ಥೆ ಮತ್ತು ಸರ್ಕಾರದ ಮೇಲೆ ವಾಗ್ದಾಳಿ ಮಾಡುವ, ದಿನಗಟ್ಟಲೆ ಚರ್ಚಿಸುವ ಬುದ್ಧಿವಂತರು ಮತ್ತು ಸುಶಿಕ್ಷಿತರೇ ಮತದಾನ ಮಾಡಿಲ್ಲ ಎಂದಾದರೆ, ಅವರಿಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಇರುತ್ತದೆಯೇ? ಈ ಬಗ್ಗೆ ನಗರದ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.

ಚಂದ್ರಪ್ರಭ ಕಠಾರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.