ವಿಜ್ಞಾನನಗರದಿಂದ ಬಸವನಗರಕ್ಕೆ ಹೋಗುವ ದಾರಿಯಲ್ಲಿ (ಸ್ಟಾರ್ ಬಜಾರ್ ಸಮೀಪ). ಸಾರ್ವಜನಿಕರು ಕಸ ತಂದು ಹಾಕುತ್ತಾರೆ. ಬಿಬಿಎಂಪಿ ಕಸದ ವಾಹನಗಳು ಸಮರ್ಪಕವಾಗಿ ಕಸದ ವಿಲೇವಾರಿ ಮಾಡುತ್ತಿಲ್ಲ.
ಜೊತೆಗೆ ಬಿಬಿಎಂಪಿ ಆಯುಕ್ತರ ಆದೇಶದ ನಾಮಫಲಕವಿದ್ದರೂ ಸಾರ್ವಜನಿಕರು ಆ ಸ್ಥಳದಲ್ಲಿ ಕಸ ತಂದು ಹಾಕುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ತಿಪ್ಪೆಯಂತೆ ಕಸದ ರಾಶಿ ಬಿದ್ದಿದ್ದು, ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವಿನಂತಿ.
–ವೀರೇಶ್, ವಿಜ್ಞಾನನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.